ಬೆಂಗಳೂರು: `ಪಶು ಸಂಗೋಪನಾ ಇಲಾಖೆಯಲ್ಲಿ ಪಶು ವೈದ್ಯಕೀಯ ಸಹಾಯಕರ ಹುದ್ದೆಗಳಿಗೆ ವೃತ್ತಿಪರ ಶಿಕ್ಷಣ (ಜೆಒಸಿ) ತರಬೇತಿ ಪಡೆದಿರುವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬೇಕು~ ಎಂದು ಕರ್ನಾಟಕ ಹೈನುಗಾರಿಗೆ ತರಬೇತಿ ಪಡೆದ ನಿರುದ್ಯೋಗಿಗಳ ಸಂಘದ ಸದಸ್ಯ ಮೋಹನಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಹಣಕಾಸು ಇಲಾಖೆ 642 ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದೆ. ಹುದ್ದೆಗಳಿಗೆ ಕಳೆದ 13 ವರ್ಷಗಳಿಂದ ನೇಮಕಾತಿ ಆಗಿಲ್ಲ. 2008ರ ಸಾಲಿನಲ್ಲಿ 300 ಪಶು ಪರೀಕ್ಷಕರ ಹುದ್ದೆಗಳ ನೇಮಕಾತಿ ನಡೆದಿತ್ತು, ಆದರೇ, ಆಗ ಪಿಯುಸಿ ಜೀವಶಾಸ್ತ್ರ ಅಧ್ಯಯನ ಮಾಡಿದವರನ್ನು ನೇಮಕ ಮಾಡಿ ಅನ್ಯಾಯ ಮಾಡಿದೆ~ ಎಂದು ಆರೋಪಿಸಿದರು.
`ರಾಜ್ಯದಲ್ಲಿ ಸುಮಾರು ಹೈನುಗಾರಿಗೆ ತರಬೇತಿ ಪಡೆದ 20 ಸಾವಿರ ಅಭ್ಯರ್ಥಿಗಳಿದ್ದು, ಇವರಲ್ಲಿ ಕೆಲವರಿಗೆ ವಯಸ್ಸು ಮೀರುತ್ತಿದೆ. ಸ್ವ ಉದ್ಯೋಗ ಮಾಡಲು ಯಾವುದೇ ಅವಕಾಶವಿಲ್ಲದ ಪರಿಸ್ಥಿತಿ ಉಂಟಾಗಿದ್ದು, ಮುಖ್ಯಮಂತ್ರಿಗಳು ಇದರ ಬಗ್ಗೆ ಕ್ರಮ ಕೈಕೊಂಡು ನ್ಯಾಯ ಒದಗಿಸಿಕೊಡಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಹಾದಿಯನ್ನು ಹಿಡಿಯುವುದು ಅನಿವಾರ್ಯ~ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಹೈನುಗಾರಿಗೆ ತರಬೇತಿ ಪಡೆದ ನೀರುದ್ಯೋಗಿಗಳ ಸಂಘದ ಪದಾಧಿಕಾರಿಗಳಾದ ಜಿ.ವಿ.ದಿನೇಶ್, ಬಿ.ನಾಗೇಂದ್ರ ಉಪಸ್ಥಿತರಿದ್ದರು.