ನವದೆಹಲಿ: ‘ನಕ್ಸಲೀಯರು ಇರುವ ಕಾರಾಗೃಹಗಳಿಗೆ ಬಿಗಿ ಭದ್ರತೆ ಒದಗಿಸಬೇಕು’ ಎಂದು ನಕ್ಸಲ್ಪೀಡಿತ 9 ರಾಜ್ಯಗಳಿಗೆ ಕೇಂದ್ರವು ಎಚ್ಚರಿಕೆ ನೀಡಿದೆ.
ಛತ್ತೀಸಗಡ, ಜಾರ್ಖಂಡ್್, ಬಿಹಾರ, ಒಡಿಶಾ, ಪಶ್ಚಿಮಬಂಗಾಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶ ರಾಜ್ಯಗಳಿಗೆ ಈ ಸಂಬಂಧ ಗೃಹ ಕಾರ್ಯದರ್ಶಿ ಪತ್ರಗಳನ್ನು ಬರೆದಿದ್ದಾರೆ.
ಜೈಲಿನಲ್ಲಿರುವ ತಮ್ಮ ಸದಸ್ಯರನ್ನು ಬಿಡಿಸಿಕೊಳ್ಳಲು ನಕ್ಸಲ್ ಮುಖಂಡರು ಹೊಂಚು ಹಾಕುತ್ತಿದ್ದಾರೆ ಎಂಬ ಮಾಹಿತಿ ಬಂದಿರುವುದಾಗಿಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ನಕ್ಸಲ್ ಮುಖಂಡರು ಇರುವ ಜೈಲಿನ ಒಳಗೆ ಹಾಗೂ ಹೊರಗೆ ಬಿಗಿ ಭದ್ರತೆ ಒದಗಿಸಿ.
ಕಾರಾಗೃಹಗಳ ಮೇಲೆ ನಡೆಯಬಹುದಾದ ನಕ್ಸಲ್ ದಾಳಿ ಪ್ರಯತ್ನವನ್ನು ವಿಫಲಗೊಳಿಸಲು ಬೇಹುಗಾರಿಕೆ ಜಾಲವನ್ನು ಬಲಪಡಿಸುವ ಅಗತ್ಯವಿದೆ ಎಂದೂ ಹೇಳಲಾಗಿದೆ.