ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರ ಗಮನಕ್ಕೆ ತಂದರೂ ಸಹ ಟ್ಯೂಬ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಮರದ ತುಂಡನ್ನು ತೆಗೆಸಿ, ನೀರು ಸರಾಗವಾಗಿ ಹರಿಯುವಂತೆ ಕ್ರಮಕೈಗೊಳ್ಳುತ್ತಿಲ್ಲ. ಅಲ್ಲದೆ ಜನಪ್ರತಿನಿಧಿಗಳ ಗಮನಕ್ಕೂ ತಂದರೂ ಏನೂ ಪ್ರಯೋಜನವಾಗುತ್ತಿಲ್ಲ. ಈ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಾವುಗಳು ಸಂಬಂಧಪಟ್ಟ ಇಲಾಖೆ ಮುಂದೆ ನೀರಿಗಾಗಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತರಾದ ದೊಡ್ಡಘಟ್ಟ ತೋಪಣ್ಣ, ರವಿ, ಹರೀಶ್, ಭೀಮೇಶ್, ಬೆನಕಪ್ಪ, ಸತ್ಯನಾರಾಯಣ ಕಬ್ಬಳ, ಹೊನ್ನೂರ್ಸಾಬ್ ನವಿಲೇಹಾಳ್, ರಫೀ ಎಚ್ಚರಿಸಿದ್ದಾರೆ.