ಮೈಸೂರು: ಮೈಸೂರಿನ ಹುಡುಗ ಎಸ್.ಡಿ. ಪ್ರಜ್ವಲ್ದೇವ್ ಮತ್ತು ಕರ್ನಾಟಕದ ಹರೀಶ್ ಸಿಂಗ್ ಶುಕ್ರವಾರ ಮೈಸೂರು ಟೆನಿಸ್ ಕ್ಲಬ್ನಲ್ಲಿ ಮುಕ್ತಾಯವಾದ `ಎಂಟಿಸಿ ಕಪ್-2012' ಎಐಟಿಎ ಟ್ಯಾಲೆಂಟ್ ಸೀರೀಸ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 18 ವರ್ಷದ ಬಾಲಕರ ಮತ್ತು 16 ವರ್ಷದ ಬಾಲಕರ ವಿಭಾಗದ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.
18 ವರ್ಷದೊಳಗಿನ ಬಾಲಕರ ವಿಭಾಗದ ಅಗ್ರಶ್ರೇಯಾಂಕದ ಆಟಗಾರ ಎಸ್.ಡಿ. ಪ್ರಜ್ವಲ್ದೇವ್ 7-5, 6-3ರಿಂದ ತಮಿಳುನಾಡಿನ ಗಣೇಶ್ ಶ್ರೀನಿವಾಸನ್ ವಿರುದ್ಧ ಗೆದ್ದರು. 18 ವರ್ಷದ ಬಾಲಕಿಯರ ವಿಭಾಗದಲ್ಲಿ ಆಂಧ್ರಪ್ರದೇಶದ ಹರ್ಷಾ ಸಾಯಿಚಲ್ಲಾ ಭರ್ಜರಿ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿ ಗೆದ್ದರು. ಫೈನಲ್ನಲ್ಲಿ ಐದನೇ ಶ್ರೇಯಾಂಕದ ಹರ್ಷಾ ಸಾಯಿಚಲ್ಲಾ 6-3, 1-6, 6-2ರಿಂದ ಮೂರನೇ ಶ್ರೇಯಾಂಕದ ಆಟಗಾರ್ತಿ, ಕರ್ನಾಟಕದ ಅಭಿಲಾಷಾ ವಿಶ್ವನಾಥನ್ ಅವರನ್ನು ಸೋಲಿಸಿದರು.
ಹರೀಶ್ಸಿಂಗ್, ಸೋಹಾ, ಪ್ರಶಸ್ತಿ: ಕರ್ನಾಟಕದ ಶ್ರೇಯಾಂಕರಹಿತ ಆಟಗಾರ ಹರೀಶ್ ಸಿಂಗ್ ಮತ್ತು ಎಸ್. ಸೋಹಾ ಕ್ರಮವಾಗಿ 16 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು. ಹರೀಶ್ಫೈನಲ್ನಲ್ಲಿ ಪಿ.ಸಿ. ಅನಿರುದ್ಧ್ ಅವರಿಗೆ ಆಘಾತ ನೀಡಿದರು.