ಧಾರವಾಡ: ಹಾಲಿ ಚಾಂಪಿಯನ್ ಆಗ್ನೇಯ ರೈಲ್ವೆ ಹಾಗೂ ಕಳೆದ ಸಲ ಸೆಮಿಫೈನಲ್ ತಲುಪಿದ್ದ ಸೆಂಟ್ರಲ್ ರೈಲ್ವೆ ತಂಡಗಳು ಇಲ್ಲಿಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿರುವ ಅಖಿಲ ಭಾರತ ರೈಲ್ವೆ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನ ತಂಡ ಸ್ಪರ್ಧೆಯ ಫೈನಲ್ನಲ್ಲಿ ಮುಖಾಮುಖಿಯಾಗಲಿವೆ.
ಸೆಮಿಫೈನಲ್ ಪಂದ್ಯಗಳಲ್ಲಿ ಆಗ್ನೇಯ ರೈಲ್ವೆ 3-1ರಿಂದ ದಕ್ಷಿಣ ರೈಲ್ವೆಯನ್ನು ಪರಾಭವಗೊಳಿಸಿದರೆ, ಸೆಂಟ್ರಲ್ ರೈಲ್ವೆ 3-0ಯಿಂದ ಆತಿಥೇಯ ನೈಋತ್ಯ ರೈಲ್ವೆ ವಿರುದ್ಧ ಜಯ ಸಾಧಿಸಿತು.
ಆಗ್ನೇಯ ರೈಲ್ವೆ ಅನಿರ್ಬನ್ ನಂದಿ 8-11, 11-3, 6-11, 5-11ರಿಂದ ಎಲ್. ಸಚಿನ್ ವಿರುದ್ಧ ಸೋಲುವ ಮೂಲಕ ಆರಂಭಿಕ ಆಘಾತವನ್ನು ಅನುಭವಿಸಬೇಕಾಯಿತು.
ಸೌಮ್ಯಜೀತ್ ಸರ್ಕಾರ್ 11-8, 8-11, 11-4, 11-7ರಿಂದ ಜಿ.ವಿನೋದ್ ಮೇಲೂ; ಅಮಿತ್ ದಾಸ್ 11-9, 4-11, 12-10, 19-17ರಿಂದ ಎಂ. ಸುಭಾಸ್ ವಿರುದ್ಧವೂ; ಅನಿರ್ಬನ್ 11-7, 13-11, 11-7ರಿಂದ ಜಿ. ವಿನೋದ್ ಮೇಲೂ ಜಯ ಸಾಧಿಸುವ ಮೂಲಕ ಫೈನಲ್ಗೆ ಅರ್ಹತೆ ಪಡೆದರು.