ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ಚಿ.ಮೂ ಕ್ಷಮೆಯಾಚನೆಗೆ ಆಗ್ರಹ

Last Updated 11 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಟಿಪ್ಪು ಸುಲ್ತಾನ್ ಕುರಿತಾಗಿ ವ್ಯತಿರಿಕ್ತ ಹೇಳಿಕೆ  ನೀಡಿರುವ  ಸಂಶೋಧಕ  ಡಾ.ಎಂ ಚಿದಾನಂದ  ಮೂರ್ತಿ  ಅವರು  ಕ್ಷಮೆಯಾಚಿಸಬೇಕು’ ಎಂದು ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಅಹ್ಮದ್‌ ಖುರೇಶಿ ಆಗ್ರಹಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಹಿತಿ  ಕೋ.ಚೆನ್ನಬಸಪ್ಪ  ಅವರು  ಬರೆದ  ‘ಅಪ್ರ­ತಿಮ  ದೇಶಭಕ್ತ  ಟಿಪ್ಪು ಸುಲ್ತಾನ್’  ಕೃತಿಯ  ಬಗ್ಗೆ  ಸಂಶೋ­ಧಕ  ಚಿದಾನಂದ  ಮೂರ್ತಿಯವರು  ಮುಸ್ಲಿಮರ  ಭಾವನೆಗಳಿಗೆ ಧಕ್ಕೆ­ಯಾಗುವ  ರೀತಿ  ಮಾತನಾಡಿದ್ದಾರೆ. ಇತಿಹಾಸವನ್ನು  ಸರಿಯಾಗಿ  ಅಧ್ಯ­ಯನ ಮಾಡದೇ  ಟಿಪ್ಪು  ಸುಲ್ತಾನ್  ಬಗ್ಗೆ  ಇಲ್ಲ  ಸಲ್ಲದ  ಟೀಕೆ  ಮಾಡಿ­ದ್ದಾರೆ’  ಎಂದು  ಹೇಳಿದರು.

ಡಿಎಸ್‍ಎಸ್  (ಅಂಬೇಡ್ಕರವಾದ) ರಾಜ್ಯ  ಸಂಚಾಲಕ  ಮಾವಳ್ಳಿ  ಶಂಕರ್  ಮಾತನಾಡಿ, ‘ಟಿಪ್ಪು  ದೇಶ  ದ್ರೋಹಿ  ಎಂಬ  ದಾಖಲೆಗಳು  ಚಿ.ಮೂ  ಅವರಲ್ಲಿದ್ದರೆ    ಬಹಿರಂಗ  ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT