ರಾಮನಾಥಪುರ: ತಂಬಾಕು ಬೆಲೆ ಕುಸಿತದಿಂದ ಕೈ ಸುಟ್ಟುಕೊಂಡ ರೈತರು ಈ ಬಾರಿ ಶುಂಠಿ ಬೆಳೆಯತ್ತ ಮುಖ ಮಾಡಿದ್ದು, ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ.ಹಲವು ವರ್ಷಗಳಿಂದ ತಂಬಾಕು ಬೆಳೆಯನ್ನೇ ಅವಲಂಬಿಸಿದ್ದ ಸಾಕಷ್ಟು ರೈತರು ಈ ಬಾರಿ ಮಾರುಕಟ್ಟೆ ಧಾರಣೆ ಕುಸಿತ ತೀವ್ರ ನಿರಾಸೆ ಉಂಟು ಮಾಡಿದೆ. ಇದರಿಂದ ಬೇಸತ್ತ ರೈತರ ಚಿತ್ತ ಶುಂಠಿ ಬೆಳೆಯತ್ತ ಹೊರಳಿದ್ದು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಕೆಲಸದಲ್ಲಿ ತೊಡಗಿದ್ದಾರೆ.