ರಾಮೇಶ್ವರ (ಪಿಟಿಐ): ಧನುಷ್ಕೋಟಿ ಸಮುದ್ರ ತೀರದ ಬಳಿ ಮೀನು ಹಿಡಿಯುತ್ತಿದ್ದ ತಮಿಳುನಾಡಿನ ಮೀನುಗಾರರ ದೋಣಿ ಮೇಲೆ ಶ್ರೀಲಂಕಾ ನೌಕಪಡೆಯು ಭಾನುವಾರ ದಾಳಿ ಮಾಡಿ ನಾಲ್ವರು ಮೀನುಗಾರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಘಟನೆಯಿಂದ ಸ್ಥಳೀಯ ಮೀನುಗಾರರ 6 ದೋಣಿ ಮತ್ತು ಬಲೆಗಳಿಗೆ ಹಾನಿಯಾಗಿವೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ತ್ಯಾಗರಾಜನ್ ತಿಳಿಸಿದ್ದಾರೆ. ಶ್ರೀಲಂಕಾ ನೌಕಾಪಡೆ ದಾಳಿಯಿಂದ ಮೀನುಗಾರರು ಹಿಂತಿರುಗಿ ಬರಲು ಸಾಧ್ಯವಾಗಿಲ್ಲ. ಅವರ ರಕ್ಷಣೆಗೆ ರಕ್ಷಣಾ ಪಡೆಯನ್ನು ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.