ನವದೆಹಲಿ (ಪಿಟಿಐ): ಮಹಾರಾಷ್ಟ್ರ ಪೊಲೀಸರ ವಶದಲ್ಲಿದ್ದ ಮುಂಬೈ ದಾಳಿಯ ಪ್ರಮುಖ ಶಂಕಿತ ರೂವಾರಿ ಅಬು ಜುಂದಾಲ್ನನ್ನು ದೆಹಲಿ ಕೋರ್ಟ್ ನಿರ್ದೇಶನದ ಮೆರೆಗೆ ಗುರುವಾರ ತಿಹಾರ್ ಜೈಲಿಗೆ ರವಾನಿಸಲಾಯಿತು.
ಜುಂದಾಲ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಲಯದ (ಸಿಎಂಎಂ) ಮ್ಯಾಜಿಸ್ಟ್ರೆಟ್ ವಿದ್ಯಾ ಪ್ರಕಾಶ್ ಅವರು ಅಕ್ಟೋಬರ್ 8 ಮತ್ತು 12 ರಂದು ಪ್ರತ್ಯೇಕ ನ್ಯಾಯಾಲಯಗಳಲ್ಲಿರುವ ವಿಚಾರಣೆಗೆ ಆತನನ್ನು ಹಾಜರುಪಡಿಸುವಂತೆ ಜೈಲು ಅಧಿಕಾರಿಗಳು ಸೂಚಿಸಿದರು.
ಇದೇ ವೇಳೆ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಅಕ್ಟೋಬರ್ 8 ರಂದು ಎನ್ಐಎ ನ್ಯಾಯಾಲಯಕ್ಕೆ ಜುಂದಾಲ್ನನ್ನು ಹಾಜರುಪಡಿಸುವ ಅಗತ್ಯವಿದೆ ಎಂದು ಹೇಳಿತು.