ನೌಕಕರು, ಶಿಕ್ಷಕರು ಹಾಗೂ ಕಾರ್ಮಿಕರನ್ನು ಒಳಗೊಂಡ ಸಮಿತಿಯು ಮಾತುಕತೆಗೆ ಪೂರ್ವಷರತ್ತು ಹಾಕಿದೆ. ನೌಕರರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳಬೇಕು, ಎಸ್ಮಾ ಕಾಯ್ದೆ ತೆಗೆದುಹಾಕಬೇಕು ಹಾಗೂ ಖೈರತಾಬಾದ್ನ ಆರ್ಟಿಎ ಕಚೇರಿಯಲ್ಲಿ ಜೆಎಸಿ ಮುಖಂಡ ಸ್ವಾಮಿ ಗೌಡ ಅವರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಜೆಎಸಿ ಆಗ್ರಹಿಸಿದೆ.