ಆಕಾಶವಾಣಿಗೆ `ನಮನ~
ಇತ್ತೀಚೆಗೆ ಅಮೃತ ಮಹೋತ್ಸವ ಆಚರಿಸಿಕೊಂಡ ಕರ್ನಾಟಕದ ಮೊದಲ ಹಾಗೂ ಹೆಮ್ಮೆಯ ಮೈಸೂರು ಆಕಾಶವಾಣಿ ಕೇಂದ್ರಕ್ಕೆ ನಮ್ಮ ನಮನ. ಈ ಕುರಿತ ಲೇಖನ ( ಸತೀಶ್ ಬೆಳ್ಳಕ್ಕಿ) ಕೇಂದ್ರದ ಸಂಸ್ಥಾಪಕ ಪ್ರೊ. ಗೋಪಾಲಸ್ವಾಮಿ ಸೇರಿದಂತೆ ಅದರ ಮೈಲಿಗಲ್ಲುಗಳನ್ನು ಸ್ಮರಿಸಿದೆ.
-ಅ.ಮೃತ್ಯುಂಜಯ, ಪಾಂಡವಪುರ
ಮಲೆನಾಡಿಗರ ಕಷ್ಟ
ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳ ಗ್ರಾಮೀಣ ಜನರು ಮಲೆಗಾಲದಲ್ಲಿ ಸಂಕದ ಮೇಲೆ ನಡೆದಾಡುವ ಸಾಹಸಗಳನ್ನು ಲೇಖನ ಸೊಗಸಾಗಿ ನಿರೂಪಿಸಿದೆ. ಸರ್ಕಾರ ಈ ಸಮಸ್ಯೆ ಬಗೆಹರಿಸಲು ಚಿಂತಿಸಬೇಕು.
-ಪದ್ಮಾ ಬಸವರಾಜಗೌಡ, ಚಿಂಚೋಡಿ, ದೇವದುರ್ಗ