ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಮಾದರಿಯಲ್ಲಿ ಹಂಪಿ ಉತ್ಸವ

Last Updated 10 ಜನವರಿ 2014, 19:30 IST
ಅಕ್ಷರ ಗಾತ್ರ

ಹಂಪಿ (ಬಳ್ಳಾರಿ ಜಿಲ್ಲೆ): ಸೂರ್ಯ ನಿತ್ಯದ ಪಯಣ ಮುಗಿಸಿ, ಪಡುವಣ ದಿಕ್ಕಿನಲ್ಲಿ ಅಸ್ತಂಗತನಾ­ಗು­ತ್ತಿದ್ದಂತೆಯೇ, ದೀಪಾ­ಲಂ­ಕಾ­ರ­­ದೊಂದಿಗೆ ಝಗಮಗ ಹೊಳೆಯಲಾರಂಭಿಸಿದ ಶ್ರೀಕೃಷ್ಣ­ದೇವರಾಯ ವೇದಿಕೆಯಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಪೂಜೆ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸಕ್ತ ಸಾಲಿನ ಹಂಪಿ ಉತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಈ ಮೂಲಕ ಕನ್ನಡ ಸಂಸ್ಕೃತಿ, ಕಲೆ, ಸಾಹಿತ್ಯ, ನೃತ್ಯ, ಸಂಗೀತ, ಶಿಲ್ಪಕಲೆಗೆ ನಾಲ್ಕು ಶತಮಾನಗಳ ಹಿಂದೆಯೇ ವಿಶಿಷ್ಟ ಸ್ಥಾನಮಾನ ನೀಡಿದ್ದ ವಿಜಯ­ನಗರ ಸಾಮ್ರಾಜ್ಯದ ಗತ­ವೈಭವ­ವನ್ನು ನೆನಪಿಸುವ ಮೂರು ದಿನಗಳ ಸಂಭ್ರಮ, ಸಡಗರಗಳು ಮೇರೆ ಮೀರಿದವು.

ಮೈಸೂರು ದಸರಾ ಉತ್ಸವದ ಮಾದರಿಯಲ್ಲೇ ಹಂಪಿ­ಯಲ್ಲಿ ಉತ್ಸವ ಆಚರಣೆ ಆರಂಭವಾಗಲು ದಿವಂಗತ ಎಂ.ಪಿ. ಪ್ರಕಾಶ್‌ ಕಾಳಜಿ ಪ್ರಮುಖ ಪಾತ್ರ ವಹಿಸಿದೆ ಎಂದು ಮುಖ್ಯಮಂತ್ರಿ ಸ್ಮರಿಸಿದರು.

ಸಾಂಸ್ಕೃತಿಕ ವೈವಿಧ್ಯದಿಂದ ಶ್ರೀಮಂತ­ವಾಗಿರುವ ನಾಡಿನ ಇತಿಹಾಸವನ್ನು ಅರಿಯಲು ಆಯೋಜಿಸಿರುವ ಉತ್ಸವದಲ್ಲಿ ಪ್ರದ­ರ್ಶನ­ಗೊಳ್ಳಲಿರುವ ಕಲೆಯನ್ನು ವೀಕ್ಷಿಸಿ ಪ್ರೋತ್ಸಾಹಿಸ­ಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಕೋರಿದರು.

ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ನೂತನ ಕಾನೂನು ರಚಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಮೂಲಕ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ ಉದ್ಯೋಗಾವ­ಕಾಶ ಹೆಚ್ಚಿಸಲಾಗು­ವುದು ಎಂದು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಸ್ವಾಗತಿಸಿದರು. 

ಉದ್ಘಾಟನಾ ಸಮಾರಂಭವು ನಿಗದಿಗಿಂತ ಎರಡು ಗಂಟೆ ತಡವಾಗಿ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT