ನಾಸಿಕ್ (ಪಿಟಿಐ): ಸ್ವಯಂಘೋಷಿತ ದೇವಮಾನವ ಸೇರಿದಂತೆ ಇಬ್ಬರನ್ನು 2.85 ಲಕ್ಷ ರೂಪಾಯಿ ಮುಖಬೆಲೆಯ ಖೋಟಾನೋಟು ಹೊಂದಿದ್ದ ಆರೋಪದ ಮೇಲೆ ಇಲ್ಲಿಗೆ ಸಮೀಪದ ತ್ರೈಂಬುಕೇಶ್ವರದಲ್ಲಿ ಬಂಧಿಸಲಾಗಿದೆ.
ಖೋಟಾನೋಟು ಜತೆಗೆ ರಿವಾಲ್ವರ್ ಮತ್ತು ಬಾಂಬ್ ತಯಾರಿಸಲು ಬೇಕಾದ ಸ್ಫೋಟಕ ಸಾಧನಗಳನ್ನು ಸಹ ಆಶ್ರಮದಿಂದ ವಶಪಡಿಸಿಕೊಳ್ಳಲಾಗಿದೆ. ಸೀತಾರಾಂ ಜತೆಗೆ ಆತನ ಸಹಚರ ಚಂದು ಗಣಪತ್ ಕಾಳೆ ಎಂಬಾತನನ್ನು ಕೂಡ ಬಂಧಿಸಲಾಗಿದೆ.