ಬೆಂಗಳೂರು: ‘ಜಮ್ಮು ಮತ್ತು ಕಾಶ್ಮೀರದ ಅಕ್ನೂರ್ ಶಾಲೆಯ 23 ವಿದ್ಯಾರ್ಥಿಗಳ ಮತ್ತು ಇಬ್ಬರು ಶಿಕ್ಷಕರ ತಂಡವು ಶೈಕ್ಷಣಿಕ ಪ್ರವಾಸದ ಅಂಗವಾಗಿ ಈಚೆಗೆ ಸೇನೆಯ ಕರ್ನಾಟಕ, ಕೇರಳ ಉಪ ವಿಭಾಗದ ಕೇಂದ್ರ ಕಚೇರಿಗೆ ಭೇಟಿ ನೀಡಿತು.
ತಂಡವು 6 ದಿನಗಳ ಶೈಕ್ಷಣಿಕ ಪ್ರವಾಸದಲ್ಲಿ ಗಾಂಧಿ ಭವನ, ಟಿಪ್ಪು ಅರಮನೆ, ಲಾಲ್ಬಾಗ್, ಬೆಂಗ ಳೂರು ಅರಮನೆ, ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ, ಇಸ್ರೋ, ದೊಡ್ಡ ಗಣಪತಿ ದೇವಸ್ಥಾನ ಸೇರಿದಂತೆ ನಗರದಲ್ಲಿನ ಐತಿಹಾಸಿಕ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲಿದೆ.