ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು 12-2-2012

Last Updated 11 ಫೆಬ್ರುವರಿ 2012, 19:40 IST
ಅಕ್ಷರ ಗಾತ್ರ

ಆಯುಷ್ ಇಲಾಖೆ: ಗಾಯಿತ್ರಿ ವಿಹಾರ ಮಂದಿರ, ಅರಮನೆ ಮೈದಾನ. ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಸಮ್ಮೇಳನದ ಸಮಾರೋಪ ಸಮಾರಂಭ. ಅತಿಥಿಗಳು- ಸಚಿವರಾದ ಆರ್.ಅಶೋಕ, ಎಸ್. ಸುರೇಶ್‌ಕುಮಾರ್, ಎಸ್.ಎ.ರಾಮದಾಸ್, ರಾಜ್ಯಸಭಾ ಸದಸ್ಯ ಡಾ.ಎಂ.ರಾಮಾ ಜೋಯಿಸ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮ. ಮಧ್ಯಾಹ್ನ 3.30.

ಅಂಕಿತ ಪುಸ್ತಕ:
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಡಾ.ಯು.ಆರ್.ಅನಂತಮೂರ್ತಿ ಅವರ `ಪ್ರಜ್ಞೆ ಮತ್ತು ಪರಿಸರ~ ವಿಮರ್ಶಾ ಸಂಕಲನ ಬಿಡುಗಡೆ. ಅತಿಥಿಗಳು- ಕವಯತ್ರಿ ಜ.ನಾ.ತೇಜಶ್ರೀ, ವಿಮರ್ಶಕ ಓ.ಎಲ್.ನಾಗಭೂಷಣ ಸ್ವಾಮಿ. ಬೆಳಿಗ್ಗೆ 10.30.

ಮ್ಯಾಕ್ಸ್ ಮುಲ್ಲರ್ ಪ್ರೌಢಶಾಲೆ:
ಕಾಮಾಕ್ಷಿಪಾಳ್ಯ ಮೈದಾನ, ಕಾಮಾಕ್ಷಿಪಾಳ್ಯ. `ವೈಭವ~ ಸಾಂಸ್ಕೃತಿ ಕಾರ್ಯಕ್ರಮ. ಅತಿಥಿ- ಸಚಿವ ಎಸ್.ಸುರೇಶ್ ಕುಮಾರ್. ಸಂಜೆ 5.

ದಿ ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್: ಶೀಷ್ ಮಹಲ್, ಅರಮನೆ ಮೈದಾನ. ವರ್ಷದ ಬ್ಯಾರಿ ಸನ್ಮಾನ ಸಮಾರಂಭ. ಅತಿಥಿಗಳು-ಪ್ರೆಸ್ಟಿಜ್ ಸಮೂಹ ಸಂಸ್ಥೆಯ ಅಧ್ಯಕ್ಷ ಇರ್ಫಾನ್ ರಝಾಕ್, ಮಾಜಿ ಸಚಿವ ಬಿ.ಎ.ಮೊಹಿದ್ದೀನ್, ಸಂಸದ ಎಚ್.ವಿಶ್ವನಾಥ್, ಶಾಸಕರಾದ ಎನ್.ಎ.ಹ್ಯಾರಿಸ್, ಯು.ಟಿ.ಖಾದರ್. ಬೆಳಿಗ್ಗೆ 10.

ನಾದರಂಜಿನಿ ಸಂಗೀತ ಸಭಾ: ಧಾರಿಣಿ ಮಹಿಳಾ ಸಂಘ, ಬಸವೇಶ್ವರನಗರ. ಪುರಂದರದಾಸರ ಪುಣ್ಯದಿನ ಮತ್ತು ತ್ಯಾಗರಾಜ ಸ್ವಾಮಿಗಳ ಆರಾಧನೆ. ಗಾಯನ- ರೂಪಾ ಮತ್ತು ದೀಪಾ. ಬೆಳಿಗ್ಗೆ 9.

ಬಿಲ್ಲವ ಅಸೋಸಿಯೇಷನ್: ಬನ್ನೇರುಘಟ್ಟ ರಸ್ತೆ, ಹುಳಿಮಾವು. ಮಹಿಳಾ ಸಮಾವೇಶ. ಅತಿಥಿಗಳು- ಮಾಜಿ ಸಚಿವೆ ರಾಣಿ ಸತೀಶ್, ಶಾಸಕರಾದ ದಿನೇಶ್ ಗುಂಡೂರಾವ್, ಸತೀಶ್ ರೆಡ್ಡಿ, ಬೇಳೂರು ಗೋಪಾಲಕೃಷ್ಣ. ಬೆಳಿಗ್ಗೆ 10.30.

ಅಪೊಲೋ ಆಸ್ಪತ್ರೆ: ಬನ್ನೇರುಘಟ್ಟ ರಸ್ತೆ. ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ಜಾಥಾ. ಬೆಳಿಗ್ಗೆ 8.

ಕರ್ನಾಟಕ ದಲಿತ ಕ್ರಿಯಾ ಸಮಿತಿ: ಬಸವ ಭವನ, ಬಸವೇಶ್ವರ ವೃತ್ತ. ಡಿ.ಎಂ.ತಿಮ್ಮರಾಯಪ್ಪ ಕುರಿತ ಪುಸ್ತಕ ಬಿಡುಗಡೆ- ನಿಡುಮಾಮಿಡಿ ಮಹಾಸಂಸ್ಥಾನದ ವೀರಭದ್ರ ಚನ್ನಮಲ್ಲ ಸ್ವಾಮೀಜಿ. ಅತಿಥಿಗಳು- ಪತ್ರಕರ್ತ ಶಶಿಧರ್ ಭಟ್, ಜನಪದ ಗಾಯಕ ಡಾ.ಬಾನಂದೂರು ಕೆಂಪಯ್ಯ. ಮಧ್ಯಾಹ್ನ 3.30.

ಬಿಬಿಎಂಪಿ: ಕಿತ್ತೂರು ರಾಣಿ ಚನ್ನಮ್ಮ ಆಟದ ಮೈದಾನ. ಜಯನಗರ 2ನೇ ಬ್ಲಾಕ್. ರಾಷ್ಟ್ರೀಯ ಪಲ್ಸ್ ಪೋಲೀಯೋ ಅಂಗವಾಗಿ ಜಾಥಾ. ಬೆಳಿಗ್ಗೆ 8.
ಕಾವೇರಿ ಮಧುಮೇಹ ಪ್ರತಿಷ್ಠಾನ; ಆತ್ಮಶ್ರೀ ಶಾಲಾ ಆವರಣ, 7ನೇ ಮುಖ್ಯರಸ್ತೆ, ಟಾಟಾಸಿಲ್ಕ್ ಫಾರಂ. ಉಚಿತ ಆರೋಗ್ಯ ತಪಾಸಣಾ ಶಿಬಿರ. ಬೆಳಿಗ್ಗೆ 10.

ಕನ್ನಡ ಅಭಿವೃದ್ಧಿ ಪ್ರಾಧಿಕಾರ: ಸುಚಿತ್ರ ಸಭಾಂಗಣ, ಬಿ.ವಿ.ಕಾರಂತ ರಸ್ತೆ, ಬನಶಂಕರಿ 2ನೇ ಹಂತ. ಕನ್ನಡ ಚಿಂತನೆ ಕಾರ್ಯಕ್ರಮದಲ್ಲಿ ಸಂಸ ಸ್ಮರಣೆ ಕುರಿತು ಉಪನ್ಯಾಸ- ರಂಗ ವಿಮರ್ಶಕ ನಾರಾಯಣ ರಾಯಚೂರು. ಸಂಜೆ 6.

ಪ್ರಗತಿ ಗ್ರಾಫಿಕ್ಸ್: ಮಿಥಿಕ್ ಸೊಸೈಟಿ ಸಭಾಂಗಣ, ನೃಪತುಂಗ ರಸ್ತೆ. ಶತ ಸ್ಮರಣಾಂಜಲಿ. ಅತಿಥಿಗಳು- ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಇತಿಹಾಸಕಾರ ಡಾ.ಸೂರ್ಯನಾಥ ಕಾಮತ್. ಬೆಳಿಗ್ಗೆ 10.

ಬ್ರಾಹ್ಮಣ ಸಭಾ: ಗಾಯತ್ರಿ ಮಂದಿರ, ಕೆಂಗೇರಿ ಉಪನಗರ. ಪ್ರತಿಭಾ ಪುರಸ್ಕಾರ ಸಮಾರಂಭ. ಅತಿಥಿಗಳು- ಚಿತ್ರನಟ ಶ್ರೀನಾಥ್, ವೈದ್ಯೆ ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ, ಸಭಾದ ಅಧ್ಯಕ್ಷ ಎಚ್.ಎಸ್. ಸುಧೀಂದ್ರಕುಮಾರ್. ಬೆಳಿಗ್ಗೆ 10.

ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು: ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪ, ಜಯನಗರ 8ನೇ ಬ್ಲಾಕ್. ದತ್ತಿ ಉಪನ್ಯಾಸ. ಅತಿಥಿಗಳು-ಸಾಹಿತಿ ಸುಶೀಲಾ ಸೋಮಶೇಖರ್, ನಿವೃತ್ತ ಎಂಜಿನಿಯರ್ ಜಿ.ರುದ್ರಪ್ಪ. ಬೆಳಿಗ್ಗೆ 10.30. 

ಸಮ್ಮಿಲನ: ವಲ್ಲಭನಿಕೇತನ, ಶೇಷಾದ್ರಿಪುರ. ಕವಿಗೋಷ್ಠಿ. ಬೆಳಿಗ್ಗೆ 10.30.

ಸಮೃದ್ಧ ಸಾಹಿತ್ಯ: ಎನ್‌ಎಂಕೆಆರ್‌ವಿ ಕಾಲೇಜು ಆವರಣ, ಜಯನಗರ. ಶಿಕ್ಷಕ ವೃತ್ತಿಯ ಸಾರ್ಥಕ ಬದುಕು ಪುಸ್ತಕ ಬಿಡುಗಡೆ. ಅತಿಥಿಗಳು- ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ಪ್ರಖ್ಯಾತ ಇತಿಹಾಸ ತಜ್ಞ ಸುರೇಶ್ ಮೂನ. ಬೆಳಿಗ್ಗೆ 10.30.

ಸಮಾಧಾನ ಆಪ್ತ ಸಲಹಾ ಕೇಂದ್ರ: ಮೈಕೋ ಬಡಾವಣೆ. ವಾರ್ಷಿಕೋತ್ಸವ. ಬೆಳಿಗ್ಗೆ 9.

ಚೈತನ್ಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ: ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ, ಜಯನಗರ 7ನೇ ಬಡಾವಣೆ. ಪುರಂದರ- ತ್ಯಾಗರಾಜರ ಆರಾಧನಾ ಮಹೋತ್ಸವ. ಬೆಳಿಗ್ಗೆ 9.30.

ರಂಗದರ್ಶಿ
ಗುಡ್ಡದ ರಾಮಾಂಜನೇಯ ದೇವಸ್ಥಾನ: ಹನುಮಂತನಗರ. ಕೃಷ್ಣ ಜನ್ಮ-ಕಂಸ ವಧ ನಾಟಕ ಪ್ರದರ್ಶನ. ಸಂಜೆ 6.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT