ಎಸ್.ಎನ್.ಬಿ.ಮೂರ್ತಿ, ಗೀತಾ ಆಲೂರು, ಅಂದಾನ್ ಕುಮಾರ್, ರಮೇಶ್ ಕಲ್ಲೂರ್, ಎಚ್.ಆಂಜಿನಪ್ಪ ನಿರ್ಮಿಸುತ್ತಿರುವ ‘ನಮ್ಮ ಕಲ್ಯಾಣಿ’ ಚಿತ್ರಕ್ಕೆ ಮಾತುಗಳ ಧ್ವನಿಮುದ್ರಣ ಕಾರ್ಯ ನಡೆಯಿತು.
ವಾಸು ಆಲೂರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎಸ್.ಎನ್.ಬಿ. ಮೂರ್ತಿ ಛಾಯಾಗ್ರಹಣ, ರಾಜು ಉಪೇಂದ್ರ ಸಂಗೀತ, ಜೆ.ಬಿ.ಸಾಹಿತ್ಯ, ರಾಜೇಶ ರೆಡ್ಡಿ ಸಂಕಲನ, ಕಪಿಲ್ ನೃತ್ಯ ನಿರ್ದೇಶನ ಇದೆ.
ತಾರಾಬಳಗದಲ್ಲಿ ಶ್ರುತಿ, ಗಣೇಶ್, ರಿಯಾ, ನಕ್ಷತ್ರ, ಬ್ಯಾಂಕ್ ಜನಾರ್ದನ್, ಶಂಕರಭಾವ, ಸಿ.ಎಸ್.ಪಾಟೀಲ್, ಮನ್ದೀಪ್ ರಾಯ್ ಅಭಿನಯಿಸಿದ್ದಾರೆ.