ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಜೋಡಿಗಳ ಕಲರವ

Last Updated 5 ಜುಲೈ 2012, 9:05 IST
ಅಕ್ಷರ ಗಾತ್ರ

ಚಾಮರಾಜನಗರ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದು ವಿಶೇಷ.

ಆಷಾಢ ಮಾಸದ ಹಿನ್ನೆಲೆಯಲ್ಲಿ ತವರು ಮನೆಗೆ ಹೆಣ್ಣುಮಗಳು ಬರುವುದು ಸಾಮಾನ್ಯ. ಈ ಅವಧಿಯಲ್ಲಿಯೇ ಚಾಮರಾಜೇಶ್ವರ ರಥೋತ್ಸವ ಕೂಡ ನಡೆಯುತ್ತದೆ. ಹೀಗಾಗಿ, ಮಾವನ ಮನೆಗೆ ಅಳಿಯ ಬರುತ್ತಾನೆ. ದಂಪತಿಯು ರಥಕ್ಕೆ ಜವನ-ಬಾಳೆಹಣ್ಣು ಎಸೆದರೆ ಕೌಂಟುಬಿಕ ಜೀವನ ಸುಖಕರವಾಗಿರುತ್ತದೆ ಎಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ನವಜೋಡಿಗಳ ಕಲರವ ಹೆಚ್ಚು. ಜಿಲ್ಲಾ ಕೇಂದ್ರ ಸೇರಿದಂತೆ ಅಕ್ಕಪಕ್ಕದ ಊರಿನ ನವಜೋಡಿಗಳು ದೇವರಿಗೆ ಭಕ್ತಿ ಸಮರ್ಪಿಸಿದರು.

`ರಥಕ್ಕೆ ಜವನ-ಬಾಳೆಹಣ್ಣು ಎಸೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಇದು ನಮ್ಮ ಸಂಸ್ಕೃತಿ. ಹೀಗಾಗಿ, ಮನೆಯ ಹಿರಿಯರ ಸಲಹೆ ಮೇರೆಗೆ ಜಾತ್ರೆಗೆ ಬಂದಿದ್ದೇವೆ. ಜಾತ್ರಾ ಮಹೋತ್ಸವ ಖುಷಿ ನೀಡಿದೆ~ ಎಂದು ನವಜೋಡಿಗಳಾದ ಮಹೇಶ್ ಮತ್ತು ಆಶಾ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT