ನಾಗಪುರ (ಪಿಟಿಐ): ಕುಖ್ಯಾತ ರೌಡಿ ಇಕ್ಬಾಲ್ ಶೇಖ್ ಅಲಿಯಾಸ್ ಗುರು (30) ಎನ್ನುವವನ ಮೇಲೆ ರೊಚ್ಚಿಗೆದ್ದ ಜನರ ಗುಂಪೊಂದು ದಾಳಿ ಮಾಡಿ ಸಾಯಿಸಿರುವ ಘಟನೆ ಇಲ್ಲಿನ ಅಮರಾವತಿ ರಸ್ತೆಯಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಏಕಾಏಕಿ ಜನರ ಗುಂಪು ರೌಡಿಯ ಮೇಲೆ ಕತ್ತಿ, ಕಲ್ಲು, ಕ್ರಿಕೆಟ್ ಗ್ಯಾಟ್ ಮತ್ತು ಮರದ ಕೋಲಿನಿಂದ ದಾಳಿ ಮಾಡಿದೆ.