ಸ್ಥಳಕ್ಕೆ ಎ.ಸಿ.ಎಫ್. ತಮ್ಮಯ್ಯ, ಆರ್.ಎಫ್.ಓ. ಪ್ರವೀಣ್ ಕುಮಾರ್, ವನಪಾಲಕರಾದ ಮಲೇಗೌಡ, ಸೋಮರಾಧ್ಯ, ವಿನೋದ್ ಭೇಟಿ ನೀಡಿದ್ದರು. ಡಾ. ವೆಂಕಟರಾಮು ಅವರು ಆನೆಯ ಶವ ಪರೀಕ್ಷೆ ನಡೆಸಿದರು. ಆನೆಗೆ ಸುಮಾರು 60 ರಿಂದ 70 ವರ್ಷ ವಯಸ್ಸಾಗಿರುವುದರಿಂದ ಸಹಜವಾಗಿ ಮೃತ ಪಟ್ಟಿದೆ ಎಂದು ಅವರು ತಿಳಿಸಿದರು. ಆನೆಯ ಭಾರೀ ಗಾತ್ರದ ದಂತವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ಮರಣೋತ್ತರ ಪರೀಕ್ಷೆ ನಂತರ ಶವ ಸಂಸ್ಕಾರ ಮಾಡಲಾಯಿತು.