ನವದೆಹಲಿ (ಪಿಟಿಐ): ಬಿಜೆಪಿ ಜಯ ಸಾಧಿಸಿರುವ ನಾಲ್ಕು ರಾಜ್ಯಗಳಲ್ಲಿ ಸರ್ಕಾರ ರಚನೆಗೆ ಸಿದ್ಧತೆ ಮಾಡಲು ಪಕ್ಷದ ಅಧ್ಯಕ್ಷ ರಾಜ್ನಾಥ್ ಸಿಂಗ್ ವೀಕ್ಷಕರನ್ನು ನೇಮಿಸಿದ್ದಾರೆ.
ಭಾನುವಾರ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಇತರ ಉನ್ನತ ನಾಯಕರು ಈ ನಿರ್ಧಾರ ಕೈಗೊಂಡಿದ್ದಾರೆ.
ಸುಷ್ಮಾ ಸ್ವರಾಜ್, ರಾಜೀವ್ ಪ್ರತಾಪ್ ರೂಡಿ ಹಾಗೂ ಅನಂತ ಕುಮಾರ್ ಮಧ್ಯಪ್ರದೇಶಕ್ಕೆ, ವೆಂಕಯ್ಯ ನಾಯ್ಡು, ಜೆ.ಪಿ. ನಡ್ಡಾ ಹಾಗೂ ಧರ್ಮೇಂದ್ರ ಪ್ರಧಾನ್ ಛತ್ತೀಸಗಡಕ್ಕೆ, ಅರುಣ್ ಜೇಟ್ಲಿ, ಅಮಿತ್ ಷಾ ಹಾಗೂ ಕಪ್ತಾನ್ ಸಿಂಗ್ ಸೋಲಂಕಿ ರಾಜಸ್ತಾನಕ್ಕೆ, ನಿತಿನ್ ಗಡ್ಕರಿ ಮತ್ತು ತಾವರ್ಚಂದ್ ಗೆಹ್ಲೋಟ್ ದೆಹಲಿಗೆ ವೀಕ್ಷಕರಾಗಿ ನೇಮಕವಾಗಿದ್ದಾರೆ.