ಬೆಂಗಳೂರು: ನೌಕರ ದಂಪತಿಯ ವರ್ಗಾವಣೆ ಮೀಸಲು ಪ್ರಮಾಣವನ್ನು ಶೇಕಡ 1ರಿಂದ ಶೇ 3ಕ್ಕೆ ಹೆಚ್ಚಿಸುವ ನಿಯಮವನ್ನು ನ್ಯಾಯಾಲಯದ ಅನುಮತಿ ಪಡೆದ ಬಳಿಕವೇ ಜಾರಿಗೊ ಳಿಸಬೇಕು ಎಂದು ಹೈಕೋರ್ಟ್ ಗುರು ವಾರ ಸರ್ಕಾರಕ್ಕೆ ಸೂಚಿಸಿದೆ.
‘ಸರ್ಕಾರಿ ನೌಕರ ದಂಪತಿ ಬೇರೆ ಬೇರೆ ಊರುಗಳಲ್ಲಿ ಕೆಲಸ ಮಾಡುವುದರಿಂದ ಕಾರ್ಯದಕ್ಷತೆ ಕುಸಿಯುವ ಸಾಧ್ಯತೆ ಇರುತ್ತದೆ. ನೌಕರ ದಂಪತಿಯನ್ನು ಪರಸ್ಪರ ದೂರ ಮಾಡುವುದರ ಬದಲಿಗೆ, ಸಾಧ್ಯವಾದಷ್ಟು ಹತ್ತಿರ ಇರುವುದಕ್ಕೆ ಅವಕಾಶ ನೀಡಿದರೆ ಒಳ್ಳೆಯದಾಗಬಹುದು.
ಈ ರೀತಿ ಅವಕಾಶ ಕಲ್ಪಿಸುವುದಕ್ಕೆ ಆದ್ಯತೆ ನೀಡಲು ಯೋಚಿಸಬೇಕು’ ಎಂದು ಅದು ಸರ್ಕಾರಕ್ಕೆ ಸಲಹೆ ಮಾಡಿದೆ. ನ್ಯಾಯಾಲಯದ ಗಮನಕ್ಕೆ ತರದೇ ವರ್ಗಾವಣೆ ಮೀಸಲು ನಿಯಮದಲ್ಲಿ ಬದಲಾವಣೆ ಮಾಡದಂತೆ ಹೈಕೋರ್ಟ್ ವಿಭಾಗೀಯ ಪೀಠವು ಈ ಅರ್ಜಿಯ ವಿಚಾರಣೆ ವೇಳೆ ಸೂಚಿಸಿದೆ.