ಪಾಲಕ್ಕಾಡ್, (ಪಿಟಿಐ): ಜಿಲ್ಲೆಯ ಶೊರ್ನೂರ್ನಲ್ಲಿನ ಪಟಾಕಿ ತಯಾರಿಕಾ ಘಟಕದಲ್ಲಿ ಮಂಗಳವಾರ ಆಕಸ್ಮಿಕ ಬೆಂಕಿಯಿಂದಾಗಿ ಸಂಭವಿಸಿದ ಸ್ಫೋಟದಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಘಟನೆ ಸಂಭವಿಸಿದಾಗ ಈ ಘಟಕದಲ್ಲಿ 12 ಮಂದಿ ಕಾರ್ಮಿಕರಿದ್ದರು. ರೈಲ್ವೆ ಹಳಿಗೆ ಸಮೀಪದ ಖಾಲಿ ಸ್ಥಳದಲ್ಲಿ ಈ ಘಟಕ ಇತ್ತು. ಸ್ಫೋಟ ಸಂಭವಿಸಿದ ಸಂದರ್ಭದಲ್ಲಿಯೇ ರೈಲೊಂದು ಸಾಗಿ ಹೋಯಿತಾದರೂ ರೈಲಿನಲ್ಲಿದ್ದವರಿಗೆ ಯಾರಿಗೂ ತೊಂದರೆಯಾಗಲಿಲ್ಲ.
‘ರಿಸೋರ್ಸ್ಸ್ಯಾಟ್-2’ ಉಡಾವಣೆಗೆ ಸಿದ್ಧತೆ
ಚೆನ್ನೈ (ಐಎಎನ್ಎಸ್): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಫೆಬ್ರುವರಿ ಅಂತ್ಯದಲ್ಲಿ ಭೂನಿರೀಕ್ಷಣ ಉಪಗ್ರಹ ‘ರಿಸೋರ್ಸ್ಸ್ಯಾಟ್-2’ ಅನ್ನು ಉಡಾವಣೆ ಮಾಡಲಿದೆ. ಇಸ್ರೊ ಎಲ್ಲ ರೀತಿಯಲ್ಲೂ ಸಜ್ಜಾಗಿದ್ದು, ಈ ದೂರ ಸಂವೇದಿ ಉಪಗ್ರಹ ವಿವಿಧ ಬಗೆಯ ಚಿತ್ರಗಳನ್ನು ಭೂ ನಿಯಂತ್ರಣ ಕೇಂದ್ರಕ್ಕೆ ರವಾನಿಸಲಿದೆ. ಫೆ. 20-25ರ ಅವಧಿಯಲ್ಲಿ ಉಡಾವಣೆ ನಡೆಯಲಿದೆ.
ಪೊಲೀಸರ ಮೇಲೆ ಸೀಮೆಎಣ್ಣೆ ಮಾಫಿಯಾ ದಾಳಿ
ನಾಗಪುರ, (ಐಎಎನ್ಎಸ್): ತೈಲ ಕಲಬೆರಕೆ ಮಾಫಿಯ ನಾಸಿಕ್ ಹೆಚ್ಚುವರಿ ಜಿಲ್ಲಾಧಿಕಾರಿ ಯಶವಂತ್ ಸೋನಾವಣೆ ಅವರನ್ನು ಸಜೀವವಾಗಿ ದಹಿಸಿ ವಾರ ಕಳೆಯುವಷ್ಟರಲ್ಲೇ ಅಕ್ರಮ ಸೀಮೆಎಣ್ಣೆ ಮಾರಾಟಗಾರರ ಜಾಲ ಮಂಗಳವಾರ ಪೊಲೀಸರ ಮೇಲೆ ದಾಳಿ ನಡೆಸಿರುವ ಪ್ರಕರಣ ನಾಗಪುರ ಜಿಲ್ಲೆಯ ಉಮ್ರೆದ್ ತೆಹಸಿಲ್ನ ರಜೂರ್ವಾಡಿ ಗ್ರಾಮದಲ್ಲಿ ನಡೆದಿದೆ.