`ಆ ನಂತರ ಹೊಸಕೋಟೆಯಲ್ಲಿ ವಾಸ್ತವ್ಯ ಹೂಡಿ, ಸಂಸಾರ ಆರಂಭಿಸಿದೆವು. ಅ.5ರಂದು ನಾಗೇಶ್ ಅವರ ಅಣ್ಣ ರಮೇಶ್, ಮಾವ ಭರತ್ ಮನೆಯ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಕಾಲುಂಗುರ, ತಾಳಿಯನ್ನು ಕಿತ್ತು, ಪ್ರಾಣ ಬೆದರಿಕೆ ಹಾಕಿದರು. ನಂತರ ನಮ್ಮಿಬ್ಬರನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿ, ಮಾಲೂರು ಪಟ್ಟಣದ ಕಾಲೇಜು ಆವರಣದ ಬಳಿ ನನ್ನನ್ನು ಇಳಿಸಿ ಹೊರಟು ಹೋದರು. ತಂದೆ-ತಾಯಿ ಮನೆಗೆ ಹೋಗಲಾರದೆ, ಪತಿ ಆಸರೆ ಇಲ್ಲದೆ ಬೀದಿ ಪಾಲಾಗಿದ್ದೇನೆ. ಪತಿಯನ್ನು ಹುಡುಕಿ ಕೊಡುವಂತೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದೇನೆ' ಎಂದು ಆಶಾ ತಿಳಿಸಿದರು.