ಪಿರಿಯಾಪಟ್ಟಣ: ತಾಲ್ಲೂಕಿನ ನಿಲವಾಡಿ ಬಳಿ ಬಾಬನಕಟ್ಟೆ ಅರಣ್ಯ ಪ್ರದೇಶದಲ್ಲಿ ನಾಲ್ಕೂವರೆ ವರ್ಷದ ಗಂಡು ಚಿರತೆಯ ಮೃತದೇಹ ಮಂಗಳವಾರ ಪತ್ತೆಯಾಗಿದೆ.
ಚಿರತೆಯ ದೇಹ ಸಂಪೂರ್ಣವಾಗಿ ಕೊಳೆತು ಹೋಗಿದ್ದು, ಈ ಬಗ್ಗೆ ದನ ಮೇಯಿಸುವ ಮಂದಿ ಮಂಗಳವಾರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಮಾಹಿತಿ ಪಡೆದ ಡಿಸಿಎಫ್ ಕೇಶವ್, ವಲಯ ಅರಣ್ಯಾಧಿಕಾರಿ ಚಿನ್ನಪ್ಪ, ಪಶು ವೈದ್ಯರಾದ ಡಾ.ಉಮಾಶಂಕರ್ರೊಂದಿಗೆ ಭೇಟಿ ನೀಡಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು.
ಮರಣೋತ್ತರ ಪರೀಕ್ಷೆ ನಡೆಸಿದ ವೈ್ಯರು ಚಿರತೆ ಸಹಜವಾಗಿ 4-5ದಿನಗಳ ಹಿಂದೆ ಸಾವ್ನಪ್ಪಿದೆ ಎಂದು ಶಂಕೆ ್ಯಕ್ತಪಡಿಸಿ್ದಾರೆ.