ಬರೀ ಮಕ್ಕಳಲ್ಲ...!
ಹೆತ್ತವರ ಕಲಹ: ಕೂಸು ಬಡವಾಯ್ತೇ? (ಡಾ. ಕೆ.ಎಸ್. ಶುಭ್ರತಾ, ಏಪ್ರಿಲ್ 13) ಲೇಖನ ಕೌಟುಂಬಿಕ ದೌರ್ಜನ್ಯದಿಂದ ಮಕ್ಕಳ ಮೇಲಾಗುವ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ವಿವರಿಸಿದೆ. ಎಷ್ಟೇ ಆಗಲಿ ಅವರಿನ್ನೂ ಮಕ್ಕಳು, ಇನ್ನೂ ಏನೂ ಅರ್ಥವಾಗದು ಎಂದುಕೊಂಡು ಮನೆಯಲ್ಲಿ ಜಗಳ, ವಾಗ್ಯುದ್ಧದಲ್ಲಿ ನಿರತರಾಗುವ ಪೋಷಕರೇ ಬಹಳಷ್ಟು ಮಂದಿ. ಆದರೆ ಮಕ್ಕಳ ಮನಸ್ಸು ಎಷ್ಟು ಸೂಕ್ಷ್ಮವಾಗಿ ಇರುತ್ತದೆ ಎಂಬುದನ್ನು ಲೇಖನ ಮನದಟ್ಟು ಮಾಡಿಸಿಕೊಟ್ಟಿದೆ.
ಸವಿತಾ, ಬೆಂಗಳೂರು