ಅದು ಸಂತಸದ ಸಂಗತಿ. ಅವರ ಗೆಲುವಿಗೆ ನಾನು ಶ್ರಮಿಸುತ್ತೇನೆ. ಆದರೆ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನರಾದ ಬಳಿಕ ಸೂತಕದ ಮನೆಯಲ್ಲಿ ಜೆಡಿಎಸ್ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ವಿರುದ್ಧ ಕಿಡಿ ಕಾರಿದರು.
‘ಲೋಕಸಭೆಗೆ ಪ್ರಮೋದಾದೇವಿ ಒಡೆಯರ್ ಅವರನ್ನು ಅವಿರೋಧಆಯ್ಕೆ ಮಾಡಬೇಕು ಎಂದು ಒಂದೆಡೆ ಹೇಳುವ ಜೆಡಿಎಸ್, ಮತ್ತೊಂದೆಡೆ ರಾಜ್ಯದ 28 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ’ ಎಂದು ಗುಡುಗಿದರು.
‘ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ಗೊಂದಲಗಳ ನಿವಾರಣೆಗೆ ಪ್ರಮೋದಾದೇವಿ ಬಯಸಿದರೆ ಸರ್ಕಾರ ಮತ್ತು ಅವರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತೇನೆ. ಈ ಕ್ಷೇತ್ರದ ಲೋಕಸಭಾ ಸದಸ್ಯನಾಗಿ ಅರಸು ಮನೆತನದ ಜೊತೆ ನಾನು ಇದ್ದೇನೆ. ಯದುವಂಶಕ್ಕೆ ಕಾಂಗ್ರೆಸ್ ಕೊಡಬೇಕಾದ ಗೌರವವನ್ನು ಹಿಂದಿನಿಂದಲೂ ಕೊಡುತ್ತಿದೆ. ಈ ಬಗ್ಗೆ ಜೆಡಿಎಸ್ನಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯ ಇಲ್ಲ’ ಎಂದು ತಿರುಗೇಟು ನೀಡಿದರು.
‘ಅರಮನೆ ಸ್ವಾಧೀನ ಮಸೂದೆ ಜಾರಿಯಾಗಿದ್ದು 1994–95ನೇ ಸಾಲಿನಲ್ಲಿ.ಆಗ ಎಚ್.ಡಿ. ದೇವೇಗೌಡರೇ ಮುಖ್ಯಮಂತ್ರಿ ಆಗಿದ್ದರು. ಆದರೆ, ಮಸೂದೆಯನ್ನು ಕಾಂಗ್ರೆಸ್ ಜಾರಿ ಮಾಡಿದೆ ಎಂದು ಜೆಡಿಎಸ್ ಗೊಂದಲ ಸೃಷ್ಟಿ ಮಾಡುತ್ತಾ ಕಥೆ ಹೇಳಿಕೊಂಡು ತಿರುಗುತ್ತಿದೆ. ಆಸ್ತಿ ವಿವಾದ ಸುಪ್ರೀಂ ಕೋರ್ಟ್ನಲ್ಲಿದ್ದು, ತೀರ್ಪು ಬಾಕಿ ಉಳಿದಿದೆ’ ಎಂದರು.