ಅಗರ್ತಲಾ (ಐಎಎನ್ಎಸ್): ತ್ರಿಪುರಾದಲ್ಲಿ ಪ್ರಸಾದದ ಲಾಡು ತಿಂದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, 30 ಮಂದಿ ಅಸ್ವಸ್ಥರಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಅಸ್ವಸ್ಥರಾದ 30 ಜನರಲ್ಲಿ 10 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ರಾತ್ರಿ ಉತ್ತರ ಧರ್ಮಾನಗರದ ಮಹೇಶಪುರ ದೇವಾಲಯದಲ್ಲಿ ಪ್ರಸಾದಕ್ಕೆ ಹಂಚಲಾದ ‘ಲಾಡು’ ತಿಂದ ಕಾರಣ ಘಟನೆ ಸಂಭವಿಸಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.