ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವ ವೀಕ್ಷಣೆಗೆ ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಮೈಸೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು `ಪ್ಯಾಕೇಜ್ ಪ್ರವಾಸ~ ಸೌಲಭ್ಯ ಕಲ್ಪಿಸಲು ಕೆಎಸ್ಆರ್ಟಿಸಿ ಮುಂದಾಗಿದೆ.
ಗಿರಿದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟ- 325 ಕಿ.ಮೀ. ಬೆಳಿಗ್ಗೆ 6.30ಕ್ಕೆ ನಿರ್ಗಮನ, ದೊಡ್ಡವರಿಗೆ ರೂ. 315 ಮತ್ತು ಮಕ್ಕಳಿಗೆ ರೂ. 160.
ಜಲದರ್ಶಿನಿ: ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ, ನಿಸರ್ಗಧಾಮ, ಅಬ್ಬಿ ಜಲಪಾತ, ರಾಜಾಸೀಟ್, ಹಾರಂಗಿ ಜಲಾಶಯ, ಕೆಆರ್ಎಸ್ ಜಲಾಶಯ- 350 ಕಿ.ಮೀ. ಬೆಳಿಗ್ಗೆ 6.30 ಗಂಟೆಗೆ ನಿರ್ಗಮನ. ದೊಡ್ಡವರಿಗೆ ರೂ. 335 ಮತ್ತು ಮಕ್ಕಳಿಗೆ ರೂ. 170.
ದೇವದರ್ಶಿನಿ: ನಂಜನಗೂಡು, ತಲಕಾಡು, ಮುಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ, ಕೆಆರ್ಎಸ್-250 ಕಿ.ಮೀ. ಬೆಳಿಗ್ಗೆ 6.30 ಗಂಟೆಗೆ ನಿರ್ಗಮನ. ದೊಡ್ಡವರಿಗೆ ರೂ. 225 ಮತ್ತು ಚಿಕ್ಕವರಿಗೆ ರೂ. 115. ಮುಂಗಡ ಟಿಕೆಟ್ ಬುಕ್ಕಿಂಗ್ಗೆ ದೂ.ಸಂಖ್ಯೆ 77609-90822 , 94480-41111, ಮೈಸೂರು ಕೇಂದ್ರೀಯ ಬಸ್ ನಿಲ್ದಾಣದ ಅವತಾರ್ ಕೌಂಟರ್ನಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಬಹುದು. ವಿವರಗಳಿಗೆ ಮೊ. 7760990822 ಸಂಪರ್ಕಿಸಬಹುದು.