ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಿಗಾಗಿ ಹೊಡೆದಾಟ

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಎಲ್ಲಪ್ಪ ನಿರ್ಮಿಸುತ್ತಿರುವ `ಬಂಗಾರಿ~ ಚಿತ್ರಕ್ಕೆ ಮಾಲೂರು ಬಳಿಯ ಒಕ್ಲೇರಿಯ ಬೆಟ್ಟದ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಚಿತ್ರೀಕರಣ ನಡೆಯಿತು. ನಾಯಕ ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲೆಂದು ಕರೆದುಕೊಂಡು ಅಲ್ಲಿಗೆ ಹೋಗಿರುತ್ತಾನೆ. ಆ ಸಂದರ್ಭದಲ್ಲಿ ನಾಯಕಿಯ ತಂದೆ ಮದುವೆ ನಿಲ್ಲಿಸಲು ಬಂದಾಗ ಅಲ್ಲಿ ನಾಯಕನ ಜೊತೆ ಹೊಡೆದಾಟ ನಡೆಯುತ್ತದೆ.

ಈ ದೃಶ್ಯವನ್ನು ಮಾಸ್ ಮಾದ, ಸಾಹಸ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಮಾ ಚಂದ್ರು ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎ.ಆರ್.ನಿರಂಜನ ಬಾಬು ಛಾಯಾಗ್ರಹಣ, ಎ.ಎಂ.ನೀಲ್ ಸಂಗೀತ, ಏಕಲವ್ಯ ಪಿ ಹಳ್ಳಿ ಸಂಭಾಷಣೆ ಮತ್ತು ಸಹ ನಿರ್ದೇಶನ, ಇಮ್ರಾನ್, ಮಾಲೂರು ಶ್ರಿನಿವಾಸ್, ಕಂಬಿ ರಾಜು ನೃತ್ಯ ನಿರ್ದೇಶನ, ಮಾಸ್ ಮಾದ ಸಾಹಸ, ಕೆ.ಎಂ. ಪ್ರಕಾಶ್ ಸಂಕಲನವಿದೆ. ಸಾಧು ಕೋಕಿಲ, ದಂಡಪಾಣಿ, ಸುಮನ ಶೆಟ್ಟಿ, ರಮೇಶ್ ಭಟ್ ಮೊದಲಾದವರ ಅಭಿನಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT