ಬೆಂಗಳೂರು: ಕೈಗಾರಿಕಾ ಬೆಳವಣಿಗೆಯು ಕುಂಠಿತಗೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕರ್ನಾಟಕ ವಾಣಿಜ್ಯೋದ್ಯಮ ಮಹಾಮಂಡಳವು (ಎಫ್ಕೆಸಿಸಿಐ), ಬ್ಯಾಂಕ್ ಬಡ್ಡಿ ದರಗಳನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗಬಾರದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ಗೆ ಒತ್ತಾಯಿಸಿದೆ.
ಕಲ್ಲಿದ್ದಲು ಉತ್ಪಾದನೆ ಕೂಡ ಗಮನಾರ್ಹವಾಗಿ ಕುಸಿತಗೊಂಡಿರುವುದೂ ಆತಂಕಕಾರಿ ವಿದ್ಯಮಾನ ಎಂದು `ಎಫ್ಕೆಸಿಸಿಐ~ ಅಧ್ಯಕ್ಷ ಜೆ. ಆರ್. ಬಂಗೇರಾ ಪ್ರತಿಕ್ರಿಯಿಸಿದ್ದಾರೆ.ಅಸಮರ್ಪಕ ವಿದ್ಯುತ್ ಪೂರೈಕೆಯೂ ಕೈಗಾರಿಕಾ ಬೆಳವಣಿಗೆಗೆ ಅಡ್ಡಿಯಾಗಿ ಪರಿಣಮಿಸಿದೆ. ಈ ಪರಿಸ್ಥಿತಿಯಲ್ಲಿ `ಆರ್ಬಿಐ~ ಇನ್ನಷ್ಟು ಬಡ್ಡಿ ದರ ಹೆಚ್ಚಿಬಾರದು ಎಂಬುದು ಉದ್ಯಮಿಗಳ ಒತ್ತಾಯವಾಗಿದೆ ಅವರು ಹೇಳಿದ್ದಾರೆ.