ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟ: ಅಸ್ವಸ್ಥ ಆನೆ ಮರಿಯ ಸಾವು

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಆನೇಕಲ್: ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಅರಣ್ಯ ವಿಭಾಗದ ವ್ಯಾಪ್ತಿಯ ಹನೂರು ಅರಣ್ಯ   ಪ್ರದೇಶದಿಂದ ತಾಲ್ಲೂಕಿನ  ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ತರಲಾಗಿದ್ದ ಆನೆ ಮರಿ ಶುಕ್ರವಾರ ಸಾವನ್ನಪ್ಪಿದೆ.

ಚಾಮರಾಜನಗರ ಜಿಲ್ಲೆಯ ಮಹಾಲಿಂಗನಕಟ್ಟೆ ಎಂಬ ಗ್ರಾಮಕ್ಕೆ ದನಕರುಗಳ ಜೊತೆ ದಾರಿ ತಪ್ಪಿ ಬಂದಿದ್ದ ಸುಮಾರು 3 ತಿಂಗಳು ವಯಸ್ಸಿನ ತಬ್ಬಲಿ ಆನೆ ಮರಿಯನ್ನು ಸ್ಥಳೀಯ ಅರಣ್ಯಾಧಿಕಾರಿಗಳು ರಕ್ಷಿಸಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಗುರುವಾರ ತಂದಿಟ್ಟಿದ್ದರು.

ಎಳೆವಯಸ್ಸಿನಲ್ಲೆಯೇ ತಾಯಿಯಿಂದ ಬೇರ್ಪಟ್ಟಿದ್ದ ಈ ಆನೆ ಮರಿಯು ತೀವ್ರ ನಿತ್ರಾಣ ಸ್ಥಿತಿ ತಲುಪಿತ್ತು.
ಆ ಕಾರಣ ಇಲ್ಲಿಯೇ ಆರೈಕೆ ಮಾಡಲಾಗುತ್ತಿತ್ತು. 

`ಆನೆಮರಿಯ ಆರೋಗ್ಯ ಪರಿಸ್ಥಿತಿ ಕ್ಷೀಣಿಸಿದ ಪರಿಣಾಮ ಶುಕ್ರವಾರ ಮೃತಪಟ್ಟಿದೆ~ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನ, ಕಾರ್ಯನಿರ್ವಾಹಕ ನಿರ್ದೇಶಕ ಡಾ. ಆರ್. ರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT