ಶಿವಮೊಗ್ಗ: ಕೆಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಇಬ್ಬರಿಗೂ ತವರು ಜಿಲ್ಲೆಯಲ್ಲಿ ಮತ್ತೊಮ್ಮೆ ಮುಖಭಂಗವಾಗಿದೆ. ಬಹುಮತ ಇದ್ದರೂ ಶಿವಮೊಗ್ಗ ನಗರಸಭೆ ಅಧ್ಯಕ್ಷ-, ಉಪಾಧ್ಯಕ್ಷ ಸ್ಥಾನ ಪಡೆಯುವಲ್ಲಿ ಇವರಿಬ್ಬರ ಪಕ್ಷಗಳಿಗೆ ಸಾಧ್ಯವಾಗಿಲ್ಲ. ಎರಡು ಧ್ರುವಗಳಾಗಿದ್ದ ಈ ನಾಯಕರಿಬ್ಬರು ಈ ಸ್ಥಾನ ಪಡೆಯಲು ಹಬ್ಬದ ನೆಪದಲ್ಲಿ 'ಒಂದಾಗಿ' ನಡೆಸಿದ್ದ ಮಾತುಕತೆ 'ಕೈ' ಕೊಟಿ್ಟದೆ. ಇವರಿಬ್ಬರ ಮೈತ್ರಿಯ ಮೊದಲ ಹೆಜ್ಜೆಯೇ ದಿಕ್ಕು ತಪ್ಪಿದೆ.
ನಾಲ್ವರು ವಿಧಾನಪರಿಷತ್ ಸದಸ್ಯರು, ಇಬ್ಬರು ಸಂಸತ್ ಸದಸ್ಯರೊಂದಿಗೆ ಕೆಜೆಪಿ, -ಬಿಜೆಪಿ ಸಮಬಲ ಹೊಂದಿತ್ತು. ಅಧಿಕಾರ ಹಿಡಿಯಲು ಒಂದೇ ಒಂದು ಪಕ್ಷೇತರ ಮತ ಸೆಳೆದಿದ್ದರೆ ಸಾಕಿತ್ತು. ಆದರೆ, ಕಾಂಗ್ರೆಸ್–-ಜೆಡಿಎಸ್ ತಂತ್ರದ ಎದುರು ಘಟಾನುಘಟಿಗಳ ಪಟ್ಟುಗಳೆಲ್ಲವೂ ಸಡಿಲಗೊಂಡಿವೆ.
ತಲೆಕೆಳಗಾದ ಲೆಕ್ಕಾಚಾರ: ಗುರುವಾರ ನಡೆದ ನಗರಸಭಾ ಅಧ್ಯಕ್ಷ-,ಉಪಾಧ್ಯಕ್ಷರ ಚುನಾವಣೆಯಲ್ಲಿ ಅನಿವಾರ್ಯವಾಗಿ ಸೋಲು ಅನುಭವಿಸ ಬೇಕಾ ಯಿತು. ಜಿಲ್ಲೆಯಲ್ಲಿ ಕೆಜೆಪಿ, -ಬಿಜೆಪಿ ಮೈತ್ರಿಯ ಮುಂದಿನ ಲೆಕ್ಕಾಚಾರಗಳೆಲ್ಲ ಈ ಮೂಲಕ ತಲೆಕೆಳಗಾಗಿವೆ.
ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ನೇತೃತ್ವದಲ್ಲಿ ನಡೆದ ಯಡಿಯೂರಪ್ಪ-, ಈಶ್ವರಪ್ಪ ಮಾತುಕತೆಯಲ್ಲಿ ಅಧ್ಯಕ್ಷ ಸ್ಥಾನ ಬಿಜೆಪಿಗೆ, ಉಪಾಧ್ಯಕ್ಷ ಸ್ಥಾನ ಕೆಜೆಪಿಗೆ ಎಂದು ನಿರ್ಧಾರವಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆದರೆ, ಕೆಜೆಪಿಯ ಇಬ್ಬರು ಸದಸ್ಯರು ಕಾಂಗ್ರೆಸ್-,ಜೆಡಿಎಸ್ ಮೈತ್ರಿಗೆ ಜೈ ಎಂದಿದ್ದರಿಂದ ಬಿಜೆಪಿ-– ಕೆಜೆಪಿ ಮೈತ್ರಿ ಅಧಿಕಾರ ಕಳೆದುಕೊಂಡಿತು.
ನಗರಸಭೆಯ ಒಟ್ಟು 35 ಸ್ಥಾನಗಳಲ್ಲಿ ಕಾಂಗ್ರೆಸ್ ಅತಿ ಹೆಚ್ಚು 12 ಸ್ಥಾನ ಹೊಂದಿದ್ದು, ಬಿಜೆಪಿ 8, ಕೆಜೆಪಿ 7, ಜೆಡಿಎಸ್ 5, ಎಸ್ಡಿಪಿಐ 1, ಪಕ್ಷೇತರರು 2 ಇದ್ದಾರೆ. ಬಿಜೆಪಿ-, ಕೆಜೆಪಿ ಮೈತ್ರಿಯಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸದಸ್ಯರಾದ ಎಂ.ಬಿ.ಭಾನುಪ್ರಕಾಶ್, ಪ್ರೊ.ಪಿ.ವಿ.ಕೃಷ್ಣಭಟ್ ಹಾಗೂ ಆರ್.ಕೆ.ಸಿದ್ದರಾಮಣ್ಣ ಕೂಡ ಮತದಾನಕ್ಕೆ ಅರ್ಹರಾಗಿದ್ದರು.
ಕಾಂಗ್ರೆಸ್ – -ಜೆಡಿಎಸ್ ಮೈತ್ರಿಯಲ್ಲಿ ಸ್ವತಃ ನಗರಸಭಾ ಸದಸ್ಯರೂ ಆದ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜೆಡಿಎಸ್ ಶಾಸಕಿ ಶಾರದಾ ಪೂರಾ್ಯನಾಯ್ಕ ಸೇರಿ ಒಟ್ಟು 18 ಮತಗಳಿದ್ದವು. ಸ್ಥಳೀಯ ಶಾಸಕರೂ ಆದ ಕೆ.ಬಿ.ಪ್ರಸನ್ನಕುಮಾರ್ ತಂತ್ರಗಾರಿಕೆ ರೂಪಿಸಿ ಇಬ್ಬರು ಪಕ್ಷೇತರ, ಒಬ್ಬ ಎಸ್ಡಿಪಿಐ ಸದಸ್ಯರನು್ನ ತಮ್ಮತ್ತ ಸೆಳೆಯುವಲ್ಲಿ ಸಫಲರಾದರು. ಕೆಜೆಪಿಯ ಇಬ್ಬರು ಸದಸ್ಯರು ಕಾಂಗೆ್ರಸ್– -ಜೆಡಿಎಸ್ ಮೈತ್ರಿ ಅಪ್ಪಿಕೊಳ್ಳುವಂತೆ ಮಾಡುವಲ್ಲಿ ‘ಯಶಸು್ಸ’ ಕಂಡಿದ್ದಾರೆ.
ಆಯ್ಕೆ: ಅಧ್ಯಕ್ಷ ಸ್ಥಾನ ಬಿಸಿಎಂ ‘ಎ’ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಖುರ್ಷಿದ್ ಭಾನು ಅಧ್ಯಕ್ಷರಾಗಿ, ಜೆಡಿಎಸ್ನ ರೇಖಾ ಚಂದ್ರಶೇಖರ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಈ ಮೈತ್ರಿಗೆ 23 ಮತಗಳು ಬಂದಿದ್ದರೆ, ಕೆಜೆಪಿ– -ಬಿಜೆಪಿ ಮೈತ್ರಿಗೆ 19 ಮತಗಳು ದಕ್ಕಿದವು.
ಕೆಜೆಪಿ– -ಬಿಜೆಪಿ ಮೈತ್ರಿಗೆ ಸೋಲುವುಂಟಾಗಿದ್ದರಿಂದ ಈ ಮೈತ್ರಿಗೆ ಮುಂದಾಳತ್ವ ವಹಿಸಿದ್ದ ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಆತಂಕ ಆರಂಭವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇದೇ ಮೈತ್ರಿಯ ಅಭ್ಯರ್ಥಿಯಾಗಲು ಹವಣಿಸುತ್ತಿದ್ದ ಅವರಿಗೆ ಆರಂಭದಲ್ಲಿ ತೊಡಕು ಕಾಣಿಸಿಕೊಂಡಿದೆ.
ಇದುವರೆಗೂ ಜಿಲ್ಲಾ ಬಿಜೆಪಿಯಿಂದ ದೂರವಾಗಿದ್ದ ಅವರಿಗೆ ಹತ್ತಿರ ಬರಲು ಇದ್ದ ಒಂದು ಅವಕಾಶದ ಬಾಗಿಲು ಮುಚ್ಚಿದಂತಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಯಿಂದಲೇ ಮೂಲೆ ಗುಂಪಾಗಿದ್ದ ಬಿಜೆಪಿ ಕೂಡ ನಗರಸಭೆಯ ಚುಕ್ಕಾಣಿ ಹಿಡಿದು ಪಕ್ಷ ದ ಸಂಘಟನೆ ವೃದಿ್ಧಗೊಳಿಸಿಲು ಚಿಂತನೆ ನಡೆಸಿತ್ತು. ಅದಕ್ಕೂ ಕೂಡ ಈಗ ಸಂಕಟ ಎದುರಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.