ಭುವನೇಶ್ವರ/ ಒಡಿಶಾ, (ಪಿಟಿಐ): ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಆಡಳಿತಾರೂಢ ಬಿಜೆಡಿಯ ಶಾಸಕ ಜಗಬಂಧು ಮಜ್ಹಿ ಅವರ ಹತ್ಯೆಯಾಗಿರುವುದನ್ನು ಖಂಡಿಸಿರುವ ವಿರೋಧ ಪಕ್ಷಗಳು ಶಾಸಕನ ಹತ್ಯೆಗೆ ಬಿಜೆಡಿ ಸರ್ಕಾರವೇ ಹೊಣೆ ಎಂದು ಭಾನುವಾರ ಆರೋಪಿಸಿವೆ.
ಮವೋವಾದಿಗಳ ಪ್ರಭಾವವಿರುವ ಪ್ರದೇಶದಲ್ಲಿ ಶಾಸಕರಿಗೆ ಒದಗಿಸಿರುವ ಭದ್ರತೆಯು ಅಸಮರ್ಪಕವಾಗಿದ್ದು, ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆಯು ಸಂಪೂರ್ಣವಾಗಿ ಕುಸಿದಿರುವುದು ಈ ಘಟನೆಯಿಂದ ತಿಳಿಯುತ್ತದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ದೂರಿದೆ.