ಶಿರಹಟ್ಟಿ: ಪಾಠ ಪ್ರವಚನ ಮೂಲಕ ಜನತಗೆ ಧಾರ್ಮಿಕ ಸಂದೇಶಗಳನ್ನು ನೀಡಿ ಜಾಗೃತಿ ಮೂಡಿಸುತ್ತಿರುವ ತಾಲ್ಲೂಕಿನ ಬನ್ನಿಕೊಪ್ಪ ಬ್ರಹನ್ಮಠದ ರಜತ ಮಹೋತ್ಸವ ನಿಮಿತ್ತ ಧರ್ಮಚಿಂತನ ಸಭೆ ಮತ್ತು ಅಡ್ಡಪಲ್ಲಕ್ಕಿ ಉತ್ಸವ ಇದೇ ೧೨ರಿಂದ ೧೪ ರವರೆಗೆ ಜರುಗಲಿವೆ.
೯೦ ವರ್ಷಗಳ ಹಿಂದೆ ಡಾ. ಎಸ್.ಎಫ್. ಹಿರೇಮಠ ಅವರು ಹುಟ್ಟು ಹಾಕಿದ ಬ್ರಹನ್ಮಠ ಹಲವಾರು ರಚನಾತ್ಮಕ ಕಾರ್ಯಗಳನ್ನು ಮಾಡುವ ಮೂಲಕ ಇದೀಗ ಜನಮಾನಸದಲ್ಲಿ ಉಳಿದುಕೊಂಡಿದೆ.
ಬ್ರಹನ್ಮಠದ ಅಡಿಯಲ್ಲಿ ೧೯೭೬ರಲ್ಲಿ ಅಡ್ಡಪಲ್ಲಕ್ಕಿ ಉತ್ಸವ ನಡೆದಿತ್ತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾ ರಾಜ್ಯದ ಗಮನ ಸೆಳೆದಿತ್ತು. ಅಂತಹ ಕಾರ್ಯಗಳನ್ನು ಮತ್ತೆ ಭಕ್ತ ಸಮೂಹ ಮಾಡುತ್ತಿರುವುದು ಸ್ಮರಣೀಯವಾದದು ಎಂದು ಮಠದ ಸುಜ್ಞಾನದೇವ ಶಿವಾಚಾರ್ಯ ಶ್ರೀಗಳು ಹಳೆಯ ಘಟನೆಗಳನ್ನು ಮೆಲಕು ಹಾಕುತ್ತಾರೆ.
‘ಶ್ರೀಗಳು ಮಠದ ಪಟ್ಟವನ್ನು ಅಲಂಕರಿಸಿ ೨೫ ವರ್ಷಗಳು ಸಂದ ಹಿನ್ನೆಲೆಯಲ್ಲಿ ಭಕ್ತರ ಆಶಯದ ಮೇರೆಗೆ ಹಲವಾರು ಧಾರ್ಮಿಕ ಚಿಂತನ, ಮಂಥನ ನಡೆಸಲು ನಿರ್ಧರಿಸಲಾಗಿದೆ ಎಂದು ಡಾ. ಸುಜ್ಞಾನದೇವ ಶಿವಾಚಾರ್ಯ ಶ್ರೀಗಳು ತಿಳಿಸಿದರು. ಮಠಕ್ಕೆ ಯಾವುದೇ ಮೂಲಗಳಿಲ್ಲ. ಆದರೂ ಭಕ್ತ ಸಮೂಹ ತನು, ಮನ, ಧನದಿಂದ ಮಠದ ಎಲ್ಲ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಾರೆ.
ಧಾರ್ಮಿಕ ಜಾಗೃತಿಯನ್ನು ತನ್ನ ಗುರಿಯಾಗಿರಿಸಿಕೊಂಡು ಸುತ್ತಮುತ್ತಲಿನ ಗ್ರಾಮಗಳಲ್ಲಿ ರಚನಾತ್ಮ ಕಾರ್ಯಗಳನ್ನು ಮಾಡುತ್ತಿರುವುದು ಸ್ತುತ್ಯಾರ್ಹವಾದದು’ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಹೇಳಿದರು. ೧೧ರಂದು ಧರ್ಮ ಚಿಂತನಗೋಷ್ಠಿ ನಡೆಯಲಿದ್ದು, ಹೊಳೆ ಇಟಗಿ ವಿರಕ್ತ ಮಠದ ಮಡಿವಾಳ ಶ್ರೀಗಳು ಸಭೆ ಸಾನಿಧ್ಯ ವಹಿಸಲಿದ್ದಾರೆ. ೧೨ರಂದು ಗುರುವಾರ ಸಮಾಜ ಚಿಂತನಗೋಷ್ಠಿ ನಡೆಯಲಿದ್ದು, ಜ.ಫಕೀರಸಿದ್ಧರಾಮ ಶ್ರೀಗಳು ಹಾಗೂ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಶ್ರೀಗಳು ಸಾನಿಧ್ಯ ವಹಿಸಿದರು.
ಇದೇ ೧೩ರಂದು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಮತ್ತು ಸಿದ್ಧಲಿಂಗರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಜರುಗಲಿದೆ. ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವವು ಪೂರ್ಣಕುಂಭ, ಕಲಶದೊಂದಿಗೆ ಬಸವಣ್ಣ ದೇವರ ಆವರಣಕ್ಕೆ(ಡಾ.ಎಸ್.ಎಫ್ ಹಿರೇಮಠ ಸಭಾಮಂಟಪ) ಶ್ರೀಗಳು ಆಗಮಿಸಲಿದೆ.
ಸಂಜೆ ಧರ್ಮೋತ್ತೇಜಕ ಸಭೆ ನಡೆಯಲಿದೆ.೧೪ರಂದು ಬ್ರಾಹ್ಮಿ ಸಮಯದಲ್ಲಿ ಡಾ. ಸುಜ್ಞಾನದೇವ ಶಿವಾಚಾರ್ಯ ಶ್ರೀಗಳಿಗೆ ರಜತ ಮಹೋತ್ಸವ ನಿಮಿತ್ತ ಮಂಗಲ ಸ್ನಾನಾಧಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿವೆ. ಬೆಳಿಗ್ಗೆ ೭ ಗಂಟೆಗೆ ವೀರಮಹೇಶ್ವರ ವಟುಗಳಿಗೆ ದೀಕ್ಷಾ ಅಯ್ಯಾಚಾರ ಕಾರ್ಯ ನಡೆಯಲಿವೆ.
–ಮಂಜುನಾಥ ಆರಪಲ್ಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.