ಗುಂಡ್ಲುಪೇಟೆ: ತಾಲ್ಲೂಕಿನ ಬೆರಟಹಳ್ಳಿ ಸಮೀಪವಿರುವ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ನೂತನ ವರ್ಷಾರಂಭದ ಪ್ರಯುಕ್ತ ಮಹದೇಶ್ವರ ಜಾತ್ರೆ ಸಂಭ್ರಮದ ನಡೆಯಿತು.
ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದು ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
ಈ ಗ್ರಾಮದವರು ಪ್ರತಿ ವರ್ಷದಂತೆ ಈ ಬಾರಿಯೂ ಹೊಸ ವರ್ಷಾಚರಣೆಯನ್ನು ದೇವಸ್ಥಾನದಲ್ಲಿ ಆಚರಿಸಿ ದರು. ಬೆಳಿಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆಗಳು ನಡೆ ಯಿತು. ಗ್ರಾಮದ ಸುತ್ತಮುತ್ತಲಿನ ಜನರು ಈ ಜಾತ್ರೆ ಯಲ್ಲಿ ಭಾಗವಹಿಸಿದ್ದರು. ಸೋಮಹಳ್ಳಿ ಮಠದ ಸಿದ್ದ ಮಲ್ಲಪ್ಪ ಸ್ವಾಮೀಜಿ ಅವರ ಪಾದಪೂಜೆ ನಡೆಯಿತು.
ಗ್ರಾಮದವರು ಒಟ್ಟಾಗಿ ಮಾಡುವ ಈ ಜಾತ್ರೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಮಹದೇಶ್ವರನ ಪೂಜೆಯಲ್ಲಿ ತೊಡಗಿದ್ದರು. ನಂತರ ಅನ್ನದಾನ ನಡೆದು ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.