ನವದೆಹಲಿ (ಪಿಟಿಐ): ಅಮೃತಸರದ ಸ್ವರ್ಣ ಮಂದಿರದಲ್ಲಿ ಅವಿತಿದ್ದ ಭಯೋತ್ಪಾದಕರನ್ನು ಹೊರದಬ್ಬುವ ಬ್ಲೂಸ್ಟಾರ್ ಕಾರ್ಯಾಚರಣೆ ಸಂದರ್ಭದಲ್ಲಿ ಸೇನಾ ತುಕಡಿಯ ಜತೆ ಪ್ರಥಮವಾಗಿ ಮಂದಿರ ಪ್ರವೇಶಿಸಿದ್ದ ನಿವೃತ್ತ ಬ್ರಿಗೇಡಿಯರ್ ಇಸ್ರಾರ್ ರಹಿಂ ಖಾನ್ ಅವರಿಗೆ ಭದ್ರತೆ ಒದಗಿಸಲು ಸರ್ಕಾರ ನಿರ್ಧರಿಸಿದೆ.
ನಿವೃತ್ತ ಲೆ. ಜ. ಬ್ರಾರ್ ಸೇರಿದಂತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಇತರ ಏಳು ಮಂದಿ ಸೇನಾ ಅಧಿಕಾರಿಗಳಿಗೆ ನೀಡಲಾಗಿರುವ ಸೈನಿಕರ ಭದ್ರತೆ ಮುಂದುವರಿಯಲಿದೆ.