ಶಿವಮೊಗ್ಗ:ಮಲೆನಾಡ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯ ಭರ್ತಿಯಾಗಿದ್ದು, ಭಾನುವಾರ ರಾತ್ರಿ ನೀರನ್ನು ಹೊರಬಿಡಲಾಯಿತು.ಭದ್ರಾ ಜಲಾಶಯದ ಗರಿಷ್ಠಮಟ್ಟ 186 ಅಡಿ. ಭಾನುವಾರ ಜಲಾಶಯದಿಂದ ನಾಲ್ಕು ಗೇಟ್ಗಳನ್ನು ತೆರೆಯುವ ಮೂಲಕ, 3 ಇಂಚು ಎತ್ತರದಲ್ಲಿ 1,700 ಕ್ಯೂಸೆಕ್ ನೀರು ಹೊರಬಿಡಲಾಯಿತು.
ಬೆಳಕಿನ ಮೋಹಕ...
ವಿದ್ಯುತ್ದೀಪ ಮಧ್ಯೆ ಜಲಾಶಯದ ಮನಮೋಹಕ ದೃಶ್ಯ ಎಲ್ಲರ ಮನಸೆಳೆಯಿತು.ಪ್ರಸಕ್ತ ವರ್ಷ ವಿವಿಧ ಬಣ್ಣಗಳಿಂದ ಕೂಡಿದ ವಿದ್ಯುತ್ ದೀಪಗಳಿಂದ ಜಲಧಾರೆಯನ್ನು ಕಂಗೋಳಿಸುವಂತೆ ಮಾಡಿದ್ದು ವಿಶೇಷವಾಗಿತ್ತು.