ಮಳೆ ಶುರುವಾಗುವ ಹೊತ್ತಿನಲ್ಲಿ
ಕೇಂದ್ರದಿಂದ ರಾಜ್ಯಕ್ಕೆ
ಬರ ಅಧ್ಯಯನ ತಂಡ ಭೇಟಿ
ಬರ ಪ್ರದೇಶಗಳೆಲ್ಲ ಸುತ್ತಿ
ದೆಹಲಿಗೆ ಹೋಗಿ, ಪರಿಹಾರ ಧನ
ಕೊಡುವರು 100 ಕೋಟಿ
ಅಷ್ಟರಲ್ಲಿ ಶುರುವಾಗುವುದು ಮಳೆ
ಪರಿಹಾರ ಧನ ನೀರಿನಲ್ಲಿ
ಹೋಗುವುದು ತೇಲಿ
ಪುಢಾರಿಗಳು ಮಾಡುವರು
ಹಣ ಲೂಟಿ!
ರಾಜ್ಯದ ಜನರ ಭರವಸೆಗಳನ್ನು
ಹಾಕುವರು ಚಿವುಟಿ
ಮುಂದೆ! ನೆರೆ ಹಾವಳಿ ಬಂದಾಗ
ಮತ್ತೆ ರಚಿಸುವರು ಕಮಿಟಿ?