ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 11-9-1961

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅಣುಸ್ಫೋಟ ನಿಷೇಧಕ್ಕೆ ರಷ್ಯ ನಿರಾಕರಣೆ
ಮಾಸ್ಕೊ, ಸೆ. 10 - ವಾಯುಮಂಡಲದಲ್ಲಿ ಪ್ರಾಯೋಗಿಕ ಅಣುಸ್ಫೋಟಕಗಳನ್ನು ನಿಷೇಧಿಸುವ ಬಗ್ಗೆ ಬ್ರಿಟನ್ ಮತ್ತು ಅಮೆರಿಕಗಳ ಜಂಟಿ ಸಲಹೆಯನ್ನು ಸೋವಿಯತ್ ಒಕ್ಕೂಟವು ತಿರಸ್ಕರಿಸಿದೆ.

ಈ ನಿರಾಕರಣೆಯನ್ನೊಳಗೊಂಡ ಪತ್ರವನ್ನು ಇಂದು ವಿದೇಶಾಂಗ ಸಚಿವರ ಕಚೇರಿಯಲ್ಲಿ ರಷ್ಯದ ಉಪವಿದೇಶಾಂಗ ಮಂತ್ರಿಯೊಬ್ಬರು ಬ್ರಿಟನ್ ಮತ್ತು ಅಮೆರಿಕ ರಾಯಭಾರಿಗಳಿಗೆ ತಲುಪಿಸಿದರು.

ಗೇಣಿ ಪುನರ್ ಸಂಪಾದನೆ ಅರ್ಜಿಗೆ ಅವಕಾಶ
ಬೆಂಗಳೂರು, ಸೆ. 10 - ಇಂದು ವಿಧಾನ ಸಭೆ ಅಧಿಕೃತ ತಿದ್ದುಪಡಿಯೊಂದನ್ನು ಅಂಗೀಕರಿಸಿ `1957ರ ಸೆಪ್ಟೆಂಬರ್ 10ಕ್ಕೆ ಹಿಂದೆ 6 ವರ್ಷಗಳ ಕಾಲ ಒಂದೇ ಸಮನೆ ಗೇಣಿಯಲ್ಲಿದ್ದು ಬಿಡಿಸಲ್ಪಟ್ಟವರು ಗೇಣಿಯ ಪುನರ್ ಸಂಪಾದನೆಗೆ ಅರ್ಜಿ ಹಾಕಿಕೊಳ್ಳಲು ಅವಕಾಶ ಕಲ್ಪಿಸಲು ತೀರ್ಮಾನಿಸಿತು.

ರಾಜ್ಯದ 7 ಪ್ರದೇಶಗಳಿಗೆ ಸಂಬಂಧಿಸಿದಂತೆ 52ನೇ ಇಸವಿಯಿಂದ ಹಿಡಿದು 56ನೇ ಇಸವಿಯವರೆಗೆ ನಾನಾ ದಿನಗಳನ್ನು ಗೊತ್ತುಮಾಡಿ ಅಲ್ಲಿಂದ ಹಿಂದಕ್ಕೆ 6 ವರ್ಷಗಳ ಕಾಲ ಎಂದು ಮಸೂದೆಯಲ್ಲಿ ಗೊತ್ತು ಮಾಡಲಾಗಿದೆ.

ಮಾಸ್ಕೋದಿಂದ ನೆಹರೂ ಪ್ರಯಾಣ
ಲಂಡನ್, ಸೆ. 10 - ಭಾರತದ ಪ್ರಧಾನ ಮಂತ್ರಿ ಪಂಡಿತ್ ನೆಹರೂರವರು ಇಂದು ಮಾಸ್ಕೋದಿಂದ ಪ್ರಯಾಣ ಮಾಡಿದರೆಂದು ಮಾಸ್ಕೋ ರೇಡಿಯೊ ಇಂದು ವರದಿ ಮಾಡಿದೆ.

ವಿಮಾನ ನಿಲ್ದಾಣಕ್ಕೆ ಖ್ರುಶ್ಚೋವ್ ಮತ್ತಿತರರು ಆಗಮಿಸಿದ್ದು ನೆಹರೂರವರಿಗೆ ಸುಖ ಪ್ರಯಾಣ ಕೋರಿದರು.

3ನೇ ಯೋಜನೆಯಲ್ಲಿ ಹೇಮಾವತಿ ಅಣೆಕಟ್ಟು
ಬೆಂಗಳೂರು, ಸೆ. 10 - ಹೇಮಾವತಿ ಯೋಜನೆಯನ್ನು ತೃತೀಯ ಪಂಚವಾರ್ಷಿಕ ಯೋಜನೆಯಲ್ಲಿ ಸೇರಿಸಬೇಕೆಂದು ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ಒತ್ತಾಯ ಪಡಿಸುವುದೆಂದು ಲೋಕೋಪಯೋಗಿ ಸಚಿವ ಶ್ರೀ ಎಚ್. ಕೆ. ವೀರಣ್ಣಗೌಡ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಈ ಯೋಜನೆಯನ್ನು ಎರಡು ಘಟ್ಟಗಳಲ್ಲಿ ಕೈಗೊಳ್ಳಬೇಕೆಂದು ಯೋಚಿಸಲಾಗಿದೆ ಎಂದು ಸಚಿವರು ಶ್ರೀ ಹಾರನಹಳ್ಳಿ ರಾಮಸ್ವಾಮಿ ಅವರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT