ನವದೆಹಲಿ: ವಿವಿಧ ಕಾರಣಗಳಿಗಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯಯತ ಪರಿಹಾರ ಒದಗಿಸುವ ಉದ್ದೇಶದ ಮಹತ್ವಾಕಾಂಕ್ಷೆಯ `ಭೂಸ್ವಾಧೀನ ಮತ್ತು ಪುನರ್ವಸತಿ ಮಸೂದೆ'ಯನ್ನು ರಾಜ್ಯಸಭೆ ಬುಧವಾರ ರಾತ್ರಿ ಅನುಮೋದಿಸಿತು.
ಮಸೂದೆಯ ಪರವಾಗಿ 131 ಮತಗಳು ಹಾಗೂ ವಿರುದ್ಧವಾಗಿ 10 ಮತಗಳು ಬಿದ್ದವು.
ಮೇಲ್ಮನೆಯಲ್ಲಿ ಕೆಲ ತಿದ್ದುಪಡಿಗಳೊಂದಿಗೆ ಅಂಗೀಕಾರಗೊಂಡಿರುವ ಮಸೂದೆಯು ಈಗ ಪುನಃ ಲೋಕಸಭೆಯ ಮುಂದೆ ಚರ್ಚೆಗೆ ಬರಲಿದೆ.