~ನನ್ನ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಿಸಾರ್ ಗೆ ತೆರಳಿ ಒಂದೆರಡು ಕಡೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಬೇಕೆಂದಿದ್ದೇನೆ. ಅದು ಸಾಧ್ಯವಾಗದೇ ಇದ್ದಲ್ಲಿ ನಾನು ಹೇಳಬೇಕೆಂದಿರುವುದನ್ನು ವೀಡಿಯೊ ಮಾಡಿ ಅಲ್ಲಿನ ಜನಕ್ಕೆ ಕಳುಹಿಸುತ್ತೇನೆ. ಜನ ಲೋಕಪಾಲ್ ಮಸೂದೆಯನ್ನು ಕಾಂಗ್ರೆಸ್ ಹೇಗೆ ತಡೆ ಹಿಡಿದಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡುವ ಮೂಲಕ ಕಾಂಗ್ರೆಸ್ ಗೆ ಮತ ಕೊಡಬೇಡಿ ಎಂದು ಮನವಿ ಮಾಡುತ್ತೇನೆ~ ಎಂದು ಇಲ್ಲಿ ಹೇಳಿದರು.