ಮುಂಜಾನೆ ಮನೆಗೆ ನೀರು ಕಾಯಿಸುವ ಸಲುವಾಗಿ ಬಾಡಿಗೆದಾರ ಸತ್ಯಸಾಯಿ ದೇವಾಲಯದ ಅರ್ಚಕ ಆನಂದಮೂರ್ತಿ ಉರಿ ಹಾಕಿದ್ದ ವೇಳೆ ಕಿಡಿ ಹಾರಿ ಬೆಂಕಿ ಆವರಿಸಿದ್ದರಿಂದ ಅಡುಗೆಮನೆ, ಬಚ್ಚಲು ಮನೆಯ ಸಾವಿರಾರು ಹೆಂಚು, ನೀರೆತ್ತುವ ಮೋಟಾರ್, ಗ್ಯಾಸ್ಸ್ಟವ್ ಮತ್ತು ಬಟ್ಟೆ ಮುಂತಾದ ಸಾಮಗ್ರಿಗಳು ಸೇರಿ ಸುಮಾರು 80ಸಾವಿರ ರೂ ಮೌಲ್ಯದ ವಸ್ತುಗಳು ಅಗ್ನಿಗೆ ಆಹುತಿಯಾದವು.
ಮನೆಯವರ ಬೊಬ್ಬೆ ಕೇಳಿ ಅಕ್ಕಪಕ್ಕದ ನಿವಾಸಿಗಳು ಬೆಂಕಿ ನಂದಿಸಲು ಯತ್ನಿಸಿದರೂ ಹತೋಟಿಗೆ ಬಾರದ್ದರಿಂದ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದು ಇತರ ಮನೆಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಿ ಭಾರೀ ಅನಾಹುತವಾಗುವುದನ್ನು ತಡೆದರು.