ಸಮಾವೇಶ ಉದ್ಘಾಟನೆಯಾಗುವ ಮೊದಲೇ ಸಭಾಂಗಣ ಕಕ್ಕಿರಿದು ತುಂಬಿತ್ತು. ಬಂದವರು ಬಾಗಿಲಲ್ಲೇ ನಿಲ್ಲಬೇಕಾಯಿತು. ಕೆಲವರು ನೆಲದಲ್ಲೇ ಕುಳಿತರು. ಸಮಾವೇಶ ಮುಗಿಯುವ ವರೆಗೂ ಅಲುಗಾಡದ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ವರ್ಮಾ, ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವ ಎಚ್.ಕೆ. ಪಾಟೀಲ ಮತ್ತಿತರರು ಹೋರಾಟದ ಹಾದಿಯನ್ನು ತೋರಿಸಿಕೊಟ್ಟರು.