ರಾಂಚಿ (ಐಎಎನ್ಎಸ್): ಮಾಟಗಾರ್ತಿ ಎಂಬ ಆರೋಪದ ಮೇಲೆ 45 ವರ್ಷದ ವಿಧವೆಯೊಬ್ಬಳನ್ನು ದುಷ್ಕರ್ಮಿಗಳ ಗುಂಪೊಂದು ಕೊಂದು, ತುಂಡರಿಸಿ, ಸುಟ್ಟು ತಿಂದ ಘಟನೆ ಜಾರ್ಖಂಡ್ನ ಗುಮ್ಲಾ ಜಿಲ್ಲೆಯಲ್ಲಿ ಜರುಗಿದೆ.
ಐತ್ವಾರಿ ಎಂಬ ಈ ಮಹಿಳೆಯ ಮಗ ಅವಧ್ ನಾಯಕ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.