ಮತ್ತೊಬ್ಬ ನಿವೃತ್ತ ಮೇಜರ್ ಜನರಲ್ ಎಂ.ಸಿ. ನಂಜಪ್ಪ ಮಾತನಾಡಿ, ‘ಸರ್ಕಾರಗಳು ಮಾಜಿ ಯೋಧರಿಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿವೆ. ಆದರೆ, ಇವುಗಳ ಲಾಭ ಕೆಳಹಂತದ ಯೋಧರಿಗೆ ದೊರಕುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವು ಮಾಜಿ ಸೈನಿಕರೊಬ್ಬರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ, ಯೋಧರಿಗೆ ಸಲ್ಲಬೇಕಾದ ಸವಲತ್ತುಗಳನ್ನು ದೊರಕಿಸಿಕೊಡಬೇಕು ಎಂದರು. ವಾಯು ಪಡೆಯ ಏರ್ ಮಾರ್ಷಲ್ ರಾಜೇಂದರ್ ಸಿಂಗ್ ಯೋಧರ ಸ್ಮಾರಕಕ್ಕೆ ಹೂಗುಚ್ಛ ಇಟ್ಟು ಗೌರವ ಸಲ್ಲಿಸಿದರು. ಕ್ಯಾಪ್ಟನ್ ರಾಠೋಡ್, ಮೇಜರ್ ಜನರಲ್ ಎ.ಕೆ. ಪ್ರಧಾನ್ ಹಾಗೂ ಸೇನಾಧಿಕಾರಿಗಳಾದ ಪಂಕಜ್ ತ್ಯಾಗಿ, ಖಜೂರಿಯಾ ಇತರರು ಉಪಸ್ಥಿತರಿದ್ದರು.