ಮಂಗಳೂರು: `ವಕ್ಫ್ ಮಂಡಳಿಯ ಆಸ್ತಿ ದುರ್ಬಳಕೆ ಕುರಿತು ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರು ಸಲ್ಲಿಸಿದ ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ' ಎಂದು ಪೌರಾಡಳಿತ ಮತ್ತು ವಕ್ಫ್ ಖಾತೆ ಸಚಿವ ಖಮರುಲ್ ಇಸ್ಲಾಂ ಭಾನುವಾರ ಇಲ್ಲಿ ಹೇಳಿದರು.
ಸಚಿವರಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಬಾರಿ ಭೇಟಿ ನೀಡಿದ ಅವರು ನಗರದ ಸರ್ಕೀಟ್ ಹೌಸ್ನಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.
`ಅನ್ವರ್ ಮಾಣಿಪ್ಪಾಡಿ ಆಯೋಗದ ಕಾರ್ಯಾವಧಿ ಮುಗಿದ ಬಳಿಕ ವರದಿ ಸಲ್ಲಿಸಿದ್ದಾರೆ. ಆಯೋಗದ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೆ ಎಲ್ಲೋ ಕುಳಿತು ವರದಿ ಸಿದ್ಧಪಡಿಸಿದ್ದರು. ಅವರು ತಯಾರಿಸಿದ ವರದಿ ರಾಜಕೀಯ ದುರುದ್ದೇಶದಿಂದ ಕೂಡಿದೆ' ಎಂದು ಆರೋಪಿಸಿದರು.
`ವರದಿಯಲ್ಲಿ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷರ ಮೇಲೆಲ್ಲ ಬೇಕಾಬಿಟ್ಟಿ ಆರೋಪ ಮಾಡಲಾಗಿದೆ. ಮಾಣಿಪ್ಪಾಡಿ ಅವರು ತಾವೊಬ್ಬರೇ ಸಾಚಾ ಎಂದು ಭಾವಿಸಿದಂತಿದೆ' ಎಂದು ಅವರು ವ್ಯಂಗ್ಯವಾಡಿದರು.