‘ಕೇವಲ ಮಾತಿನ ಬಂಡವಾಳದ ಮೇಲೆ ಚುನಾ ವಣೆ ಗೆಲ್ಲಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ಕಠಿಣ ಪರಿ ಶ್ರಮ ಕೂಡ ಬೇಕಾಗುತ್ತದೆ’ ಎಂದೂ ಕಿವಿಮಾತು ಹೇಳಿದರು.
ಈ ಹಿಂದೆ ಕೇಂದ್ರದಲ್ಲಿ ಅಧಿಕಾರ ದಲ್ಲಿದ್ದ ಎನ್ಡಿಎ ಸರ್ಕಾರದ ಸಾಧನೆ ಯನ್ನು ಹೊಗಳಿಸಿದ ಅಡ್ವಾಣಿ, ವಿವಿಧ ರಾಜ್ಯಗಳಲ್ಲಿನ ಬಿಜೆಪಿ ಸರ್ಕಾರಗಳ ಸಾಧನೆಯನ್ನು ಹೊಗಳುವುದಕ್ಕೂ ಮರೆಯಲಿಲ್ಲ. ಮೋದಿ, ಶಿವರಾಜ್ ಸಿಂಗ್ ಚೌಹಾಣ್, ಛತ್ತೀಸ ಗಡ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಕೆಲಸವನ್ನು ಕೂಡ ಶ್ಲಾಘಿಸಿದರು.