ಬೆಂಗಳೂರು: ಮಾಸಾಂತ್ಯದಲ್ಲಿ ಖಾಲಿ ಆಗಲಿರುವ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಹೊಸ ಸದಸ್ಯರನ್ನು ನಾಮಕರಣ ಮಾಡುವ ಸಂಬಂಧ ಬಿಜೆಪಿಯಲ್ಲಿ ಚರ್ಚೆ ಆರಂಭವಾಗಿದೆ.
ಜೆಡಿಎಸ್ನ ವೈ.ಎಸ್.ವಿ.ದತ್ತ ಮತ್ತು ಬಿಜೆಪಿಯ ಶ್ರೀನಾಥ್ ಹಾಗೂ ಎನ್.ತಿಪ್ಪಣ್ಣ ಮೇ ಅಂತ್ಯದಲ್ಲಿ ನಿವೃತ್ತರಾಗುತ್ತಿದ್ದಾರೆ. ಈ ಸ್ಥಾನಗಳ ಭರ್ತಿ ಕುರಿತು ಸೋಮವಾರದ ಸಂಪುಟ ಸಭೆಯಲ್ಲಿ ಅನೌಪಚಾರಿಕ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.