ಬೆಂಗಳೂರು:ಮೈಸೂರು ಮಿನರಲ್ಸ್ ನಿಯಮಿತ (ಎಂಎಂಎಲ್) ಸಂಸ್ಥೆಯು 2010-11 ನೇ ಸಾಲಿನಲ್ಲಿ ರೂ. 567ಕೋಟಿ ಮೊತ್ತದ ದಾಖಲೆ ವಹಿವಾಟು ನಡೆಸಿದೆ. ಈ ಅವಧಿಯಲ್ಲಿ ಸಂಸ್ಥೆಯು ರೂ.422 ಕೋಟಿ ತೆರಿಗೆ ಪೂರ್ವ ಮತ್ತು ರೂ. 277 ಕೋಟಿ ತೆರಿಗೆ ನಂತರದ ಲಾಭ ಗಳಿಸಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
`ಎಂಎಂಎಲ್~ ಗಣಿಗಾರಿಕೆಯಲ್ಲಿ ತೊಡಗಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ಯಮವಾಗಿದ್ದು, ಗಣಿಗಾರಿಕಾ ಕ್ಷೇತ್ರದಲ್ಲಿನ ಉತ್ತಮ ಸಾಧನೆಗಾಗಿ 2010-11 ನೇ ಸಾಲಿನ ಮುಖ್ಯಮಂತ್ರಿಗಳ `ರತ್ನ ಪ್ರಶಸ್ತಿ~ ಪಡೆದುಕೊಂಡಿದೆ.
ಸಂಸ್ಥೆಯು 2004-05ರಿಂದ 2011ರ ವರೆಗೆ ಸತತವಾಗಿ ಲಾಭ ಗಳಿಸುತ್ತಿದ್ದು, 2010-11 ನೇ ಸಾಲಿನಲ್ಲಿ ದಾಖಲೆ ವಹಿವಾಟು ನಡೆಸಿದೆ. ಇತ್ತೀಚೆಗೆ ನಡೆದ ಸಂಸ್ಥೆಯ 288ನೇ ಮಂಡಳಿ ಸಭೆಯ ನಿರ್ಣಯದಂತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎರಡನೇ ಕಂತಾಗಿ ್ಙ5 ಕೋಟಿ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಲಾಯಿತು.