ಸಿದ್ದಾಪುರ: `ಯಕ್ಷಗಾನದ ಶ್ರೇಷ್ಠತೆ ಉಳಿಯಬೇಕಾದರೆ ಮತ್ತು ಆ ಕಲೆ ಸರಿಯಾದ ದಾರಿಯಲ್ಲಿ ಮುಂದುವರಿಯಬೇಕಾದರೆ ಕಲಾವಿದರೊಡನೆ ಪ್ರೇಕ್ಷಕರ ಕರ್ತವ್ಯ ಕೂಡ ಇರುತ್ತದೆ' ಎಂದು ಯಕ್ಷಗಾನ ಸಂಶೋಧಕಿ ಡಾ.ವಿಜಯನಳಿನಿ ರಮೇಶ ಹೇಳಿದರು.
ಬೆಂಗಳೂರಿನ ಯಕ್ಷಗಾನ ಬಯಲಾಟ ಅಕಾಡೆಮಿಯ ಸಹಕಾರದೊಂದಿಗೆ, ಸ್ಥಳೀಯ ಬೆಳಸಲಿಗೆ ಯಕ್ಷಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ತಾಲ್ಲೂಕಿನ ಕವಲಕೊಪ್ಪದ ವಿನಾಯಕ ದೇವಾಲಯದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ದಿ.ಬೆಳಸಲಿಗೆ ಗಣಪತಿ ಹೆಗಡೆ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.